VARUNA LAKE.


ವರುಣಾ-ಕರುಣಾ... 



        ಮೈಸೂರಿನಿಂದ ತಿ. ನರಸೀಪುರಕ್ಕೆ ಹೋಗುವ ಮಾರ್ಗದಲ್ಲಿ ಅನತಿ ದೂರದಲ್ಲೇ ವರುಣಾ ಗ್ರಾಮವೂ, ಅಲ್ಲೇ ಎಡಬದಿಗೆ ವರುಣಾಕೆರೆಯೂ  ಸಿಗುತ್ತವೆ.  ಇತ್ತೀಚೆಗಂತೂ ದಸರಾ ಕಾಲದಲ್ಲಿ ಜಲಕ್ರೀಡೆಗಳಿಗೋಸ್ಕರ  ಇದನ್ನು ತುಂಬಿಸಿರುತ್ತಾರೆ.  ಕೆಲವರ್ಷಗಳ ಹಿಂದೆ ಈ ಕೆರೆಯ ಎಡಪಕ್ಕದಲ್ಲಿ  ಸಮೃದ್ಧವಾದ ಮರಗಳ ತೋಪೊಂದಿತ್ತು.  ಕ್ರಮೇಣ ಅವುಗಳು ಒಂದೊಂದಾಗಿ, ಗುಂಪುಗುಂಪಾಗಿ   ನಮಗೆಲ್ಲಾ ಅರ್ಥವಾಗದ ಯಾವುದೋ ಘನವಾದ ಕಾರಣಗಳಿಂದ  ಕೊಡಲಿಗಳಿಗೆ ಬಲಿಯಾದವು.  ಹಲವಾರು ಸಲ ಆ ತಾಣಕ್ಕೆ ಹೋಗಿಬರುವ ಪರಿಪಾಠವನ್ನಿಟ್ಟುಕೊಂಡಿದ್ದ  ನನಗೆ  ಈ ವೃಕ್ಷಹನನ ನೋವನ್ನುಂಟುಮಾಡಿತು.  ನನ್ನದೇ ರೀತಿಯಲ್ಲಿ  ಇದನ್ನು ಹೀಗೆ ವ್ಯಾಖ್ಯಾನಿಸುವ ಪ್ರಯತ್ನ ಮಾಡಿದ್ದೇನೆ. 

        ಪ್ರಕೃತಿ ಸುಂದರ: ಎಂದು ಭಾವುಕವಾಗಿ   ಇಲ್ಲಿನ  ಮೇಘಮಾಲಾಲಂಕೃತವಾದ  ಆಕಾಶವನ್ನೂ, ೨/೩ ಅನುಪಾತದಲ್ಲಿ ದೃಶ್ಯವಾಗಿ ಸಂಯೋಜಿಸಿರುವುದನ್ನೂ ಈ ಸಲ ಪ್ರಸ್ತಾಪಿಸುತ್ತಿಲ್ಲ- ಅವುಗಳನ್ನು ಬಿಟ್ಟು, ಇಲ್ಲಿ ಮುನ್ನೆಲೆಯಲ್ಲಿ ಕಾಣುತ್ತಿರುವ ಮರಗಳ ಕರುಣಾಕಥೆಯ ಕಡೆ ಗಮನ ಸೆಳೆಯುತ್ತಿದ್ದೇನೆ.  ಶಿರಚ್ಛೇದನಕ್ಕೆ ಒಳಗಾಗಿರುವ ತಮ್ಮವನೇ ಆದ ಮಿತ್ರನ[ಮಧ್ಯದಲ್ಲಿರುವ ತುಂಡಾದ ಮರ]  ಅವಸಾನವನ್ನು ಕಣ್ಣಾರೆ ಕಂಡು, ಎಡ -ಬಲಗಳ ಮರಗಳು ಕೈಚಾಚಿ  "ಹೋಗಿಬಿಟ್ಟೆಯಾ,, ಗೆಳೆಯಾ ಹೋಗಿಬಿಟ್ಟೆಯಾ?" ಎಂದು  ಆಕ್ರಂದನ ಮಾಡುತ್ತಿರುವಂತಿದೆಯಲ್ಲವೇ?  ಅಲ್ಲೇ ಬಲಗಡೆ ಮುನ್ನೆಲೆಯಲ್ಲಿ ಕಾಣುವ  ಮೂರನೆಯ ಮರವು ದುಃಖದ ತುರೀಯಾವಸ್ಥೆಯನ್ನು ತಲುಪಿ, ಆ ದಿಕ್ಕಿಗೇ  ಬೆನ್ನು ಹಾಕಿ ವಿಮುಖಗೊಂಡು ಸ್ತಬ್ದವಾಗಿರುವಂತೆ ಕಾಣುವುದಿಲ್ಲವೇ?   ಈ ದಾರುಣವನ್ನು ನೋಡಿ ಆಗಸವೂ ಗಾಢವರ್ಣವನ್ನು ಹೊಂದಿ ವಿಷಾದಸೂಚನೆ ಮಾಡುತ್ತಿರುವಂತೆ ಕಾಣುವುದಿಲ್ಲವೇ?    ಆ ದಡದ ಮಂಟಪವೊಂದು ಮೂಕಸಾಕ್ಷಿಯಾಗಿ  ಕಾಣಬರುತ್ತಿರುವುದು. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....