Posts

Showing posts from December, 2016

DAY-LIGHT?

Image
        ಹಗಲುದೀಪ?         ನಿಜ, ಇದು ಹಗಲುದೀಪವೇ.  ರಾತ್ರಿಕಾಲದಲ್ಲಿ ಚಿತ್ರಿಸಿದ್ದಲ್ಲ, ಪರಂತು- ಮಟಮಟಮಧ್ಯಾಹ್ನದಲ್ಲಿ ಸೆರೆಹಿಡಿದದ್ದು. ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ, ಸಮಯಾವಕಾಶವಿನ್ನೂ ಇತ್ತಾಗಿ  ಕ್ಯಾಮರಾ ನೆನಪಾಯಿತು.  ಹೋಗಿದ್ದು ಬೇರೆ ಕಡೆಗೇ ಆದರೂ ಮಾರ್ಗಮಧ್ಯೆ ರಸ್ತೆಗಳ ಕೂಡೊಂದರಲ್ಲಿ  ಸಂಚಾರ ನಿಯಂತ್ರಣ  ವ್ಯವಸ್ಥೆಗಾಗಿ   ನಿಲ್ಲಿಸಬೇಕಾಗಿ ಬಂತು.  ಸುಮ್ಮನೆ ಹಾಗೇ  ಅತ್ತಿತ್ತ ನೋಡುತ್ತಿದ್ದವನಿಗೆ ಕಂಡದ್ದೇ ಈ ದೀಪದಕಂಬ. ಆ ಕಡೆ ವಾಹನಸಂಚಾರಕ್ಕೆ  ತೆರವಾದರೂ  ಗಮನಿಸದೇ ನನ್ನ ವಾಹನವನ್ನು ರಸ್ತೆಬದಿಗೆ ಹಾಕಿ, ಓಡಿದೆ. ನಡುಮಧ್ಯಾಹ್ನವಾದ್ದ ರಿಂದ  ನೆತ್ತಿಯಮೇಲೇ  ಸೂರ್ಯ! ತಲೆಯೆತ್ತಲಾಗದ ಪ್ರಖರತೆ! ಕ್ಯಾಮರಾ ಬಳಸುವ ಚಾಪಲ್ಯ ಅದನ್ನೂ ಮೀರಿದ್ದು! ಹಾಗಾಗಿ ಆ ಕಂಬವನ್ನು ಇಲ್ಲಿ ಹಿಂದೀಪ್ತವಾಗುವಂತೆ [silhoutte] ಮಾಡಿದೆ.          ನಿಮೇಷವೇಗವನ್ನು  ಸಾವಿರಗಳಲ್ಲಿ ತಂದಿಟ್ಟು, ಇಲ್ಲಿ ಕಂಬದ ತುದಿಯಲ್ಲಿರುವ ದೀಪದ ಆವರಣಕ್ಕಾಗಿ ಮಾಡಿರುವ ಗಾಜಿನ ಬುರುಡೆಯನ್ನು ನೇರವಾಗಿ ಸೂರ್ಯನ ಬಿಂಬಕ್ಕೆ ಅಡ್ಡವಾಗಿ - ದೃಷ್ಟಿಪಥಕ್ಕೆ ಸರಿಯಾಗಿ  ಹಿಡಿದು ಕ್ಲಿಕ್ಕಿಸಿದ ಚಿತ್ರವಿದು.  ಡಿಎಸ್ಎಲ್ಆರ್  ಒಂದ...

PORTRAITURE OF UNDERWORLD DONS.

Image
ಪ್ರಸಿದ್ಧ ಖಳನಾಯಕರ  ವ್ಯಕ್ತಿಚಿತ್ರ...          ಕೆಲವು ದಶಕಗಳ ಹಿಂದೆ ಮುಂಬಯಿ ಭೂಗತಪ್ರಪಂಚದ  ನಾಯಕರು ಕೆಲವರು ಜನಜನಿತರಾಗಿದ್ದರು.  ಅವರುಗಳ ಸ್ವಭಾವ, ಕಾರ್ಯಶೈಲಿ, ಕಾಠಿಣ್ಯ ಹಾಗೂ ತಮ್ಮವರಲ್ಲಿ ಕರುಣೆ ಇತ್ಯಾದಿ ಸಂಗತಿಗಳು ಜನಸಾಮಾನ್ಯರಿಗೆ  ದಂತಕತೆಗಳಾಗಿದ್ದವು.  ಆ ಪ್ರಪಂಚದಲ್ಲಿಯೂ ಬದಲಾವಣೆಯ ಗಾಳಿ ಬೀಸಿತು,  ಹಾಲಿ[ಜಿ]ಗಳಾಗಿದ್ದವರು, ಜನರಿಗೆ ವರ[ಪ್ರ]ದರಾಗಿದ್ದವರು  ಕಾರ್ಯಕ್ಷೇತ್ರದಿಂದ ಹಾಗೂ ಜೀವನದಿಂದಲೂ  ಕೂಡಾ ನಿವೃತ್ತರಾದರು.  ಹೊಸದಾಗಿ ತಲೆಯೆತ್ತಿದವ  ತನ್ನ ಪೂರ್ವಸೂರಿಗಳಂತೆ  ತನ್ನ ವಲಯಗಳಲ್ಲಾದರೂ  ಸುಪ್ರಸಿದ್ಧನಾಗಲಿಲ್ಲ; ಪರಂತು ಸರ್ವಲೋಕಾಪಕಾರಿಯೇ ಆದ,  ಸರಸ್ಸನ್ನು ಹೊಕ್ಕ ಸುಯೋಧನನಂತೆ  ದೇಶಬಿಟ್ಟೋಡಿ  ದೂರದಿಂದಲೇ ವ್ಯವಹಾರ ನಡೆಸಿದ.          ಇರಲಿ,  ಪ್ರಸ್ತುತ  ಪ್ರಸಂಗಕ್ಕೆ ಬರೋಣ.  ಹಳೆಯ ಮನೆಯೊಂದನ್ನು ಕೆಡವಿ ಹೊಸತಾಗಿ ನಿರ್ಮಿಸುತ್ತಿದ್ದ  ಜಾಗವೊಂದು ಕಣ್ಣಿಗೆ ಬಿತ್ತು.  ಹಳೆಯ ಮನೆಯಿಂದ ತೆಗೆದ ಛಾವಣಿಯ ಪಕ್ಕಾಸು, ಹೆಂಚುಗಳನ್ನು  ಅಲ್ಲೇ ಪಕ್ಕದ ಗಲ್ಲಿಯಲ್ಲಿ ಜೋಡಿಸಿದ್ದರು.  ಹಿನ್ನೆಲೆಯ  ಗೋಡೆಯೂ ಶಿಥಿಲವಾಗಿತ್ತು.  ಅಲ್ಲಿ ಮುಂದೆ ಒಂದೆರಡು ಚಿಮಣಿತಲೆಯುಳ್ಳ ಹೆಂಚುಗ...

CANAL CORNER- Part 2.

Image
ಕಾಲುವೆ ಮೂಲೆಯಲ್ಲಿ ಸೂರ್ಯಾಸ್ತ

CANAL CORNER.

Image
ಕಾಲುವೆ ಮೂಲೆ.          ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ  [ಮೈಸೂರಿನಿಂದಹೊರಟು]  ಫನ್ ಫೋರ್ಟ್ ವಿಹಾರಸ್ಥಾನ ದಾಟಿದ ಮೇಲೆ  ಸ್ವಲ್ಪ ಮುಂದಿರುವ  ಕಾಲ್ದಾರಿಯೊಂದರಲ್ಲಿ ಎಡಗಡೆ ಸಾಗಿದರೆ ಸುಮಾರು ನೂರು ಮಾರು ದೂರದಲ್ಲಿ ದೇವರಾಜ ನಾಲೆ  ಎದುರಾಗುತ್ತದೆ.  ಈ ತಾಣದಲ್ಲಿ ಕಾಲುವೆ ಕುದುರೆಲಾಳದ ಆಕಾರದಲ್ಲಿ  ತಿರುವು ಪಡೆದಿದೆ- ಹಾಗಾಗಿ ಮೂಲೆ ಎಂದು ಕರೆಯಲ್ಪಡುತ್ತದೆ.  ಈ ತಿರುವಿನ ನೇರ ಹಿನ್ನೆಲೆಯಲ್ಲಿ  ಪಾಲಹಳ್ಳಿ ರೈಲುನಿಲ್ದಾಣವಿದೆ.  ಹೆದ್ದಾರಿಯಿಂದ ಕೂಗಳತೆ  ದೂರದಲ್ಲಿರುವ  ಈ ಕಾಲುವೆ ಮೂಲೆ  ಪ್ರಶಾಂತವಾದ ಸ್ಥಳ.   ಪಕ್ಷಿಛಾಯಾಗ್ರಾಹಕರು ಕೆಲವರು ಆಗಾಗ ಬರುವುದುಂಟು. ಸ್ಥಳೀಯ ಬಾಲಕರು  ಜಲವಿಹಾರಕ್ಕೆಂದೂ  ಇಲ್ಲಿಗೆ ಬರುವರು.  ಕಾಲುವೆಯಲ್ಲಿ ನೀರು ಹರಿವಿದ್ದಾಗ  ಅದ್ಭುತರಮ್ಯದೃಶ್ಯವೊಂದು   ಸಂಭವಿಸುತ್ತದೆ-  ಸೂರ್ಯಾಸ್ತದ ವೇಳೆಗೆ.  ಇತ್ತೀಚೆಗಿನ ದಿನಗಳಲ್ಲಿ ನಾನು ಪದೇ ಪದೇ ಎಡತಾಕುವ  ತಾಣವಿದು.          ಡಿಜಿಟಲ್ ಕ್ಯಾಮರಾದಲ್ಲಿ ಸರಣಿಚಿತ್ರಗಳನ್ನು ತೆಗೆದು  ಆಮೇಲೆ  ತಂತ್ರಾಂಶದ ನೆರವಿನಿಂದ  ಅವುಗಳನ್ನು ಒಂದೇ ಚಿತ್ರವಾಗುವಂತೆ  ಹೊಲಿಯುವ - ಫೋಟೋಸ್ಟಿಚಿಂ...

FLYOVER AT KENGERI.

Image
        ಕೆಂಗೇರಿಯಲ್ಲಿನ  ಮೇಲ್ದಾರಿ.           ಮೈಸೂರು- ಬೆಂಗಳೂರು ರಸ್ತೆಯಲ್ಲಿನ ಕೆಂಗೇರಿಯ ಮೇಲ್ದಾರಿಸೇತುವೆ  ನನ್ನ ಪ್ರಕಾರ ಪ್ರೇಕ್ಷಣೀಯವೇ.  ಸೂರ್ಯಾಸ್ತದ ಸಮಯದಲ್ಲಿ ಆ ಕಮಾನಿನ ತುದಿಯಲ್ಲಿ ಮೂಡಿಬರುವ  ಸೂರ್ಯನ ಬಿಂಬವು  ದೃಶ್ಯದ ಒಟ್ಟಂದಕ್ಕೆ ಬಲು ಪೂರಕವಾಗಿ, ಮನೋಹರವಾಗಿರುತ್ತದೆ.          ಪ್ರಸ್ತುತ ಪ್ರಸಂಗದಲ್ಲಿ.   ನನ್ನ ಕೈಯಲ್ಲಿ ಡಿಎಸ್ಎಲ್ಆರ್  ಇರಲಿಲ್ಲ, ಬದಲಾಗಿ ಕಿರುಕ್ಯಾಮೆರಾ  [Compact Camera] ಮಾತ್ರ ಇದ್ದಿತು. ಹಾಗಾಗಿ CA ಮುಂತಾದ ವೈಕಲ್ಯಗಳು  ಅಧಿಕವಾಗಿವೆ.   ಸೂರ್ಯಾಸ್ತವಾದ   ಕೆಲವೇ ಕ್ಷಣಗಳಲ್ಲಿ  ಸೆರೆಸಿಕ್ಕ  ನೋಟ ಹೀಗೆ. ನೆಲೆಮಟ್ಟದಲ್ಲಿರುವ ರಸ್ತೆದೀಪದ ಕಂಬವಾದರೂ ತಗ್ಗಿನಪಾತಳಿಯಿಂದ ಮೇಲುಗಡೆಗೆ ನೋಡುವ ವಿವೀಕ್ಷೆಗೆ  ಸೇತುವೆಯ ಕಮಾನಿನ ಎತ್ತರವೇ  ಕಾಣುತ್ತದೆ  ಹಾಗೂ  ಚಿತ್ರದ ಬಹುಪಾಲು ತುಂಬಿರುವ  ಈ ಕಮಾನಿಗೆ ಪ್ರತ್ಯರ್ಥಿಯಾಗಿ  ಒಂಟಿಯಾಗಿ  ಸಾಟಿಯಾಗಿ ನಿಂತಿದೆ.  ಹಿನ್ನೆಲೆಯಲ್ಲಿನ ದೇದೀಪ್ಯಮಾನವಾದ ಆಕಾಶವು  ಈ ಇಡೀ ಮೇಲಾಟಕ್ಕೆ  ವೇದಿಕೆಯನ್ನೊದಗಿಸಿದೆ.