Posts

Showing posts from January, 2017

END FOR THE DAY'S WORK....

Image
         ದಿನದ ಕಾಯಕದ ಸಮಾಪ್ತಿ...          ಕೆ.ಅರ.ಎಸ  ನ   ಹಿನ್ನೀರಿನ ಪ್ರದೇಶದಲ್ಲಿ ಕಂಡುಬಂದ ದೃಶ್ಯವಿದು.  ಅಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನು ಚಿತ್ರಿಸಲು ಹಲವಾರು ಬಾರಿ ಎಡತಾಕಿದ್ದೇನೆ, ನನ್ನ ಮಿತ್ರ-ಬಾಂಧವರನ್ನೂ ಕರೆದೊಯ್ದಿದ್ದೇನೆ.  ಹಾಗೊಮ್ಮೆ  ಹೋಗಿದ್ದಾಗ ಕಂಡಿದ್ದು ಇದು. ಆ ದೇಗುಲದ ಹಿಂದೆ ಸ್ವಲ್ಪ ದೂರದಲ್ಲಿ ನದೀತೀರದಲ್ಲಿ ಸರಕು-ಸಾಗಣೆ ರಿಕ್ಷಾ ಒಂದು ನಿಂತಿತ್ತು.  ಅದರ ಯಜಮಾನನೂ ಕೆಲಸಗಾರನೂ ಅಲ್ಲೇ ಮಾತಾಡಿಕೊಳ್ಳುತ್ತಿದ್ದರು.  ನನಗೆ ಕೈ ಬೆರಳೂ, ಮನಸ್ಸೂ ಚಡಪಡಿಸಿದವು.  ಕ್ಯಾಮರಾ ಗುಂಡಿಯನ್ನೊತ್ತಿ  ಶಾಂತಿಯನ್ನು  ಹೊಂದಿದೆ.          ಇಡೀ ದೃಶ್ಯದಲ್ಲಿ ಇಬ್ಬರೇ ಇರುವುದು, ಈ ಸಮಯದಲ್ಲಿ  ಮತ್ತೆ ಇನ್ಯಾರೂ ಆ ಪ್ರದೇಶದಲ್ಲೇ ಇರಲಿಲ್ಲ.  ಹಾಗಾಗಿ ಅಲ್ಲಿ ಅವರಿಬ್ಬರದೇ ಏಕಾಂತ,   ಅವರೊಂದಿಗೆ ಮೂಕಶ್ರೋತೃವಾಗಿ ಅವರ ವಾಹನ.  ಇವಿಷ್ಟು ಬಿಟ್ಟರೆ ಮೇಲ್ತುದಿಯಲ್ಲಿ ಮುಳುಗುತ್ತಿರುವ ಸೂರ್ಯ ಮತ್ತು ಕೊನೆಯದಾಗಿ  ಮೂರು ಸ್ತರಗಳಲ್ಲಿ ವಿಸ್ತಾರವಾಗಿ ಹರವಿಕೊಂಡಿರುವ ಅವಕಾಶ[Space].  ಈ ದೃಶ್ಯದಲ್ಲಿ ಮುಳುಗಿಬಿಟ್ಟಂತೇ   ಕಾಣುವ ಸೂರ್ಯ, ನಿರ್ಜನವಾದ ವಾತಾವರಣ, ಸೂರ್ಯಾಸ್ತದ ಛ...

BEFORE HARVEST..

Image
        ಸಂಕ್ರಾಂತಿಗೆ  ಮುನ್ನ  ಕಟಾವಿಗೆ ಸಿದ್ಧವಾಗಿರುವ ಬೆಳೆ ...                                       ಶ್ರೀರಂಗಪಟ್ಟಣದಿಂದ  ಕರಿಘಟ್ಟಕ್ಕೆ  ಹೋಗುವ  ದಾರಿಯಲ್ಲಿ  ಇಕ್ಕೆಲಗಳಲ್ಲೂ  ಪಚ್ಚೆಹಸಿರು: ಭತ್ತದ ಗದ್ದೆಗಳು. ಸಾಮಾನ್ಯವಾಗಿ ಡಿಸೆಂಬರ್ ಕೊನೆಯ ವೇಳೆಯಲ್ಲಿ ಪೈರು ಕಟಾವಿಗೆ ಸಿದ್ಧಗೊಂಡಿರುತ್ತದೆ.  ಈ   ಭತ್ತದ ಗದ್ದೆಗಳು ಕಟಾವಿಗೆ ಪಕ್ವವಾದ  ಸಮಯದಲ್ಲಿ  ವಿಶಿಷ್ಟವಾದ ಹೊಂಬಣ್ಣವನ್ನು ತಳೆಯುತ್ತವೆ, ನಮ್ಮಗಳ ಮನಸ್ಸಿಗೆ  ಚೇತೋಹಾರಿಯಾಗಿ ಪರಿಣಮಿಸಿ  ದೇಶ್ ಎಂಬ ರಾಗದ ಭಾವರೂಪವಾದ  ಆನಂದವನ್ನುಂಟುಮಾಡುತ್ತದೆ.  ಇರಲಿ, ಈ ದೇಶ್ ರಾಗದ ವಿಷಯ ಸದ್ಯಕ್ಕೆ ಬೇಡ.           ಪ್ರಸ್ತುತ ಚಿತ್ರದಲ್ಲಿ ಹಳದಿಯಿಂದ ಪ್ರಾರಂಭವಾಗುವ ಬಣ್ಣಗಳ ಹರವು, ಮೇಲೆ ಆಕಾಶದಲ್ಲಿನ - ಹಳದಿಗೆ ಪ್ರತ್ಯರ್ಥಿಯಾದ ನೀಲಿಬಣ್ಣದೊಂದಿಗೆ ಪರ್ಯಾವಸಾನಗೊಂಡಿದೆ. ಮುನ್ನೆಲೆಯಲ್ಲಿನ ಈ ಹಳದಿಯ ವಿಜೃಂಭಣೆ  ಅದರ ಹಿಂದಿರುವ ಕಬ್ಬಿನಗದ್ದೆಗಳ ಹಸಿರಿನಿಂದ ಬೆಂಬಲಿಸಲ್ಪಟ್ಟರೂ,   ಹಿನ್ನೆಲೆಯಲ್ಲಿನ ಬೆಟ್ಟದ ಭಾಗದ  ಹಾಗೂ ಆಗಸದ ಶಾಂತವಾದ, ಪೇಲವವ...

MAHADEVAPURA.....

Image
    ಮಹದೇವಪುರದಲ್ಲಿನ ಜಲರೇಚಕಾಗಾರ..          ಮಹದೇವಪುರವೆಂದರೆ ಛಾಯಾಗ್ರಾಹಕರಿಗೆ  ಭೂರಿಭೋಜನ!! ಇಡೀ ಮಹದೇವಪುರದ ಸಮಗ್ರ ಚಿತ್ರಾವಳಿಯ ವಿಚಾರ ಹಾಗಿರಲಿ.  ಸದ್ಯದ ಗ್ರಾಸವೆಂದರೆ  ಈ  ಚಿತ್ರ ಮಾತ್ರ.  ಇಲ್ಲಿ ಕ್ಯಾಮೆರಾ ಹಿಡಿದು ಅರಸುತ್ತಾ ಹೋದರೆ ಮಿತಿಯಿಲ್ಲದ ಸಾಧ್ಯತೆಗಳು,  ಸ್ಮೃತಿಕೋಶಗಳು ತುಂಬಿ ತುಳುಕುತ್ತವೆ.           ಪ್ರಸ್ತುತ ಚಿತ್ರದಲ್ಲಿ ನಿಶ್ಚಲವಾಗಿರುವ ನೀರು,  ಕಾಲುವೆಯಲ್ಲಿ  ಹರಿವು ನಿಂತಿರುವುದರಿಂದ ಉಂಟಾಗಿರುವುದು. ಆದ್ದರಿಂದಲೇ ಇಲ್ಲಿ ಪ್ರತಿಬಿಂಬ. ತೆಂಗಿನಮರಗಳ ಸಾಲಿನಿಂದ ಏರ್ಪಟ್ಟಿರುವ ಕಮಾನು ಹಾಗೆ ನೀರಲ್ಲೂ ಪ್ರತಿಬಿಂಬಿಸಿ ಅರ್ಧಚಂದ್ರಾಕೃತಿಯಾಗಿದೆ. ಕಟ್ಟಡಗಳ ಸಾಲು ಅದೇ ಪಾತಳಿಯಲ್ಲಿ ಇದ್ದು, ಅದೇ ಪರಿಸರದಲ್ಲಿನ ಇತರ ವರ್ಣವ್ಯಾಪ್ತಿಗಳ ಜತೆಗೆ ಹದವಾಗಿ  ಬೆರೆತಿದೆ. ದೃಶ್ಯ ಸುಂದರವಾಗಿದೆಯಲ್ಲವೇ?   ಆದರೆ, ಇಡೀ  ಚಿತ್ರದ ಸ್ಥಾವರತ್ವಕ್ಕೆ ಕಾರಣವಾಗಿರುವುದು  ಸಾಕಷ್ಟು  ಹರಿವಿಲ್ಲದೆ, ಕಡೇಪಕ್ಷ ನಾಲೆಯ ದುರಸ್ತಿಯಾದರೂ ಮಾಡೋಣವೆಂದು ನಿಲ್ಲಿಸಿಕೊಂಡ ನೀರಿನಿಂದ, ನೀರಿನ ಒರತೆಯ ಕೊರತೆಯಿಂದ.  ಸಂತಸದ ಹಿಂದೆ ಇರುವ ವಿಷಾದ- ಇದೇ. 

CURVES IN TAMARASSERY GHAT ROAD.

Image
        ತಾಮರಸ್ಸೆರಿ  ಘಟ್ಟದ ರಸ್ತೆಯಲ್ಲಿನ ತಿರುವುಗಳು.           ಸುಲ್ತಾನ್ ಬತೇರಿಯಿಂದ  ಕಲ್ಲಿಕೋಟೆಯ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಕ್ಕಿಡಿ ಗಿರಿಧಾಮವನ್ನು ದಾಟಿದ ಮೇಲೆ  ಸ್ವಲ್ಪ ಮುಂದೆ ಒಂದು ವೀಕ್ಷಣಾಗೋಪುರವಿದೆ. ಅಲ್ಲಿಂದ ಪ್ರಾರಂಭವಾಗುವ ಘಟ್ಟಪ್ರದೇಶ ಕೆಲವು ಮೈಲುಗಳ ನಂತರ ಮುಗಿಯುತ್ತದೆ.  ಆದರೆ ರಸ್ತೆ ಅಗಲವಾಗಿದ್ದರೂ, ಪಕ್ಕದ ಇಳಿಜಾರು ಅತ್ಯಂತ ಕಡಿದಾಗಿದ್ದು ತುಂಬಾ ಅಪಾಯಕಾರಿಯಾಗಿದೆ.  ಈ ವೀಕ್ಷಣಾಗೋಪುರದ ಸಮೀಪದಿಂದ ಒಂದು ಕುತೂಹಲಕಾರಿಯಾದ ದೃಶ್ಯ ಕಾಣಸಿಗುತ್ತದೆ.  ಕೆಳಗೆ ನೇರ ಮುಂದೆ, ಸುಮಾರು ನಾನೂರು ಆಡಿಗಳ ಆಚೆಗೆ,  ಇದೆ ಹೆದ್ದಾರಿಯ ಮುಂದುವರಿದ ಭಾಗ ಕಾಣುತ್ತದೆ. ತಿರುವು ಎರಡು , ಮೂರು ಮತ್ತು ನಾಲ್ಕು  ಇಲ್ಲಿ ಮೇಲಿನಿಂದ ನಮಗೆ ಕಾಣಿಸುತ್ತದೆ.  ನಾವು ನಿಂತಿರುವ ಎತ್ತರದ ಅರಿವು ನಮಗೆ ಉಂಟಾಗುತ್ತದೆ. ಕಥೆ ಅಲ್ಲಿಗೆ ಮುಗಿಯುವುದಿಲ್ಲ,  ಆ ತಿರುವುಗಳಾಚೆಗೂ ಇನ್ನೂ ಪ್ರಪಾತ ಮುಂದುವರೆದಿದ್ದು, ಅಲ್ಲಿಂದ ಮತ್ತೆ ನೂರಿನ್ನೂರು ಅಡಿ ಕೆಳಗೆ ಇಳಿದರೆ ನೆಲಮಟ್ಟಕ್ಕೆ ತಲುಪುತ್ತೇವೆ.  ನಮ್ಮ ಹಿಂದಿನಿಂದ ಸಾಗಿದ ಯಾವುದೇ ವಾಹನವು ಇಪ್ಪತ್ತು ನಿಮಿಷಗಳ ನಂತರ ಸಣ್ಣ ಬೆಂಕಿಪೆಟ್ಟಿಗೆಯ ಗಾತ್ರದಲ್ಲಿ ಈ ತಿರುವುಗಳನ್ನು ದಾಟುವುದನ್ನು ನೋಡಬಹುದು.  ನಿಜವಾಗಿ ಮೈ ನ...