Posts

Showing posts from April, 2017

RAJENDRAVIHAR PALACE SHOT FROM ZOO.

Image
        ಮೃಗಾಲಯದಿಂದ ಕಂಡ ಮಹಾರಾಜಾಲಯ ....          ಕಳೆದವರ್ಷದಲ್ಲೊಂದು ದಿನ ನನ್ನ  ೭೦-೩೦೦ಮಿಮೀ ದೂರದರ್ಶಿ ಮಸೂರವನ್ನು ಮೃಗಾಲಯಕ್ಕೆ ಒಯ್ದಿದ್ದೆ.  ವನ್ಯಜೀವಿ ಛಾಯಾಗ್ರಹಣವವು ನನ್ನ ತುತ್ತಲ್ಲ; ಎಂದೂ ನನ್ನ ಆಸಕ್ತಿಯಾಗಿರಲಿಲ್ಲ . ಅಂದುಮಾತ್ರ ಈ ದೂರದರ್ಶಿ ಮಸೂರದ ಸದ್ಬಳಕೆ ಮಾಡುವ ಇರಾದೆಯಿಂದ ಹುಲಿ-ಸಿಂಹಾದಿಗಳು ಸಿಕ್ಕರೆ ನೋಡುವಾ ಎಂದು ಅಲ್ಲಿಗೆ ಹೋಗಿದ್ದೆ.  ಮೃಗಾಲಯದಲ್ಲಿ ಹುಲಿಗಳಿರುವ ಆವರಣವನ್ನು ತಲುಪಿ, ಕ್ಯಾಮರಾವನ್ನು ಸಿದ್ಧಪಡಿಸಿಕೊಂಡೆ ಕೂಡಾ. ತುತ್ತೂರಿಯಂತಿರುವ ಬೃಹತ್ ಮಸೂರಗಳನ್ನು ಗುರಿಯಿಟ್ಟುಕೊಂಡು ಕಾಯುತ್ತಿದ್ದ ಕೆಲವು ಅಭ್ಯಾಸಿಗಳನ್ನೂ, ಹಾಗಲ್ಲದೆ ಚರವಾಣಿಗಳ ಕ್ಯಾಮರಾಗಳನ್ನು[Cell Phone Camera]  ಗುರಿಮಾಡಿ ಹಿಡಿದ  ನೂರಾರು ಜನರನ್ನೂ ನೋಡಿದೆ.  ನಾನು ಇತೋ ಭ್ರಷ್ಟ: ತತೋ ಭ್ರಷ್ಟ: ಏಕೆಂದರೆ, ನನ್ನ ಉಪಕರಣವು ಆ ಅಭ್ಯಾಸಿಗಳದ್ದಂತೆ ಮಹಾಸಮರ್ಥವಲ್ಲ; ಇತ್ತ ಚರವಾಣಿಯ ಕ್ಯಾಮರಾದಿಂದಲೇ  ಎಲ್ಲವನ್ನೂ ಸೆರೆಹಿಡಿಯಬಲ್ಲೆನೆಂಬುವ ಛಾತಿಯೂ ನನಗಿಲ್ಲ.          ಹುಲಿಯು ಮರೆಯಿಂದ ಹೊರಗೆ ಬಂದಿತು. ರಾಜಗಾಂಭೀರ್ಯದಿಂದ ಅತ್ತಿತ್ತ ನೋಡುತ್ತಾ ನಡೆದು ಬರುತ್ತಿದ್ದ ಅದರ ಠೀವಿಯೇ  ಒಂದು ಸೊಗಸು. ಇತ್ತ  ನೆರೆದ ಜನಸ್ತೋಮದಲ್ಲಿ ತುಮುಲವೇ ಉಂಟಾಯಿತು...

UNIQUE PLACE TO SLEEP...

Image
ಅಪೂರ್ವ ನಿದ್ರಾವಿಧಾನ...        ನಗರದ ಬಾಲಗಂಗಾಧರನಾಥ ಮೇಲ್ದಾರಿಯಿಂದ ಕೆ. ಆರ್. ಮಾರುಕಟ್ಟೆಗೆ ಇಳಿಯುವ ಕವಲಿನ  ಬಲಭಾಗದಲ್ಲಿ  ಕಂಡ ದೃಶ್ಯವಿದು. ಒಬ್ಬಾನೊಬ್ಬ ವ್ಯಕ್ತಿಯು, ರಸ್ತೆಯಲ್ಲಿ ಸಂಚಾರನಿಯಂತ್ರಣದ ಬಳಕೆಗೆಂದು ಇಡಲಾಗಿದ್ದ ಕಬ್ಬಿಣದ ತಡೆಗೋಡೆಯನ್ನೇ ತನಗೆ ಬಿಸಿಲಿನಿಂದ ಹಾಗೂ  ಧಾವಿಸಿ ಬರುವ ವಾಹನಗಳಿಂದ ರಕ್ಷಿಸಿಕೊಳ್ಳಲು ಏರ್ಪಾಡು ಮಾಡಿಕೊಂಡು ಗಡದ್ದಾಗಿ ನಿದ್ರಿಸುತ್ತಿದ್ದ! ನಿದ್ರೆ, ಶ್ರಮಬಾಹುಳ್ಯಜನ್ಯವಾದದ್ದೇ ಅಥವಾ ಅತಿಮದ್ಯಪಾನಮೂಲವಾದದ್ದೇ ಎಂಬ ಜಿಜ್ಞಾಸೆ ಇಲ್ಲಿ ಅಪ್ರಸ್ತುತ.          ನಡೆದುಹೋಗುವುದಕ್ಕೇ  ಸ್ಥಳವಿಲ್ಲದೇ ಕಿಷ್ಕಿಂಧಾದಂತಿರುವ ಈ ಮಾರ್ಗದಲ್ಲಿ ಅದುಹೇಗೋ ಹುಡುಕಿಕೊಂಡು ಸಾಲದ್ದಕ್ಕೆ ಸಿಕ್ಕ ತಡೆಗೋಡೆಯನ್ನೇ ಅಡ್ಡವಿಟ್ಟುಕೊಂಡು ನೆಮ್ಮದಿಯಾಗಿ ನಿದ್ರೆಹೋದ ಆತನ ಪ್ರವೃತ್ತಿಗೊಂದು ಶರಣು. 

MOCKERY OF DEMOCRACY...

Image
  ಮಂಟಪದಲ್ಲಿ ಶುನಕ; ಪ್ರಜಾಪ್ರಭುತ್ವದ  ಅಣಕ!         ನಗರದ ಉದ್ಯಾನವೊಂದರ  ಬದಿಯಲ್ಲಿ ಹಾದುಹೋಗುತ್ತಿದ್ದಾಗ ಕಣ್ಣಿಗೆ ಬಿದ್ದ ದೃಶ್ಯವಿದು.  ಆ ಉದ್ಯಾನದ ಒಳಗೆ ನಿರ್ಮಿಸಿರುವ ಮಂಟಪವೊಂದರಲ್ಲಿ ಬೀದಿನಾಯಿಯೊಂದು ಕುಳಿತಿತ್ತು.  ಅದನ್ನು ನೋಡಿ, ನನಗೆ ಸ್ವಾತಂತ್ರ್ಯಾನಂತರದ ನಮ್ಮ ದೇಶದ ಪ್ರಜಾಪ್ರಭುತ್ವದ ಸ್ಥಿತಿ-ಗತಿಗಳು ಒಂದು ದೃಶ್ಯವಾಗಿ- ರೂಪಕವಾಗಿ  ಕಣ್ಣಿಗೆ ರಾಚಿದಂತಾಗಿ. ಅನಾಮತ್ತು ಕ್ಲಿಕ್ಕಿಸಿಕೊಂಡೆ.          ಇಲ್ಲಿ ನಾನು ನಾಯಿಯನ್ನು ಹೀನತೆಯ ಸಂಕೇತವಾಗಿ ಅರ್ಥೈಸುತ್ತಿದ್ದೇನೆ; ನಿಷ್ಠೆ ಎಂಬ ಸಕಾರಾತ್ಮಕ ಅರ್ಥದಲ್ಲಲ್ಲ.  ಈ ಇಂಗಿತವನ್ನು ಮನದಲ್ಲಿಟ್ಟುಕೊಂಡು ನೋಡಬೇಕು.   ಮೊದಲೇ ನಾಯಿ; ಮೇಲಾಗಿ ಬೀದಿನಾಯಿ, ಸುಂದರವಾಗಿ ನಿರ್ಮಿಸಿದ ಉದ್ಯಾನದಲ್ಲಿ  ಸರಿಯಾದ ನಿರ್ಬಂಧವ್ಯವಸ್ಥೆಯಿಲ್ಲದೇ  ಒಳಗೆ ನುಗ್ಗಿದೆ,  ಅಲ್ಲಿದ್ದ  ಮಂಟಪವೊಂದರಲ್ಲಿ [ಅದು ಖಂಡಿತವಾಗಿಯೂ ಈ ನಾಯಿಗಳಿಗೆಂದು ಮಾಡಿದ್ದಲ್ಲ!] ಹೋಗಿ ವಿರಾಜಮಾನವಾಗಿ ಕುಳಿತಿತು! ಎಂಥಾ ವಿಪರ್ಯಾಸ? ಇದನ್ನಲ್ಲವೇ ಈಗ ನಾವು ಪ್ರಜಾಪ್ರಭುತ್ವ ಎಂದು ಭ್ರಮಿಸಿಕೊಂಡು ಬೀಗುತ್ತಿರುವುದು?  ಹೀನಸ್ವಭಾವದ, ಅದಕ್ಕಿಂತಾ ಹೀನಹಿನ್ನೆಲೆಯಿರುವವನೊಬ್ಬ, ಅದ್ಭುತವಾದ ಜೀವನಮೌಲ್ಯಗಳಿಂದ ಕೂಡಿರುವ ನಮ್ಮ ಭಾರತದೇಶವೆಂಬ  ಉದ್ಯಾನವನದಲ್ಲಿ...

PRAYING BEFORE GOD....

Image
ಸೂರ್ಯದೇವನ ಮುಂದೆ ಪ್ರಾರ್ಥನೆ...          ಅದೇ ಕೋಮಾಛಾಯಾ ಕಾರ್ಯಕ್ರಮದಂದೇ ಕಣ್ಣಿಗೆ ಬಿದ್ದ ಮತ್ತೊಂದು ದೃಶ್ಯವಿದು.  ಸಾಮಾನ್ಯವಾಗಿ ಲಲಿತಮಹಲ್ ಆಸುಪಾಸಿನಲ್ಲಿ  ಸುಂದರವಾದ ಸೂರ್ಯೋದಯ-ಸೂರ್ಯಾಸ್ತಗಳು ಕಣ್ಣುತುಂಬುತ್ತವೆ.  ಈ ಸಲ  ಹೀಗಾಯಿತು- ಕ್ಯಾಮೆರಾವನ್ನು ಹೊಂದಿಸಿಕೊಳ್ಳುತ್ತಿದ್ದ ನನ್ನ ಪಕ್ಕದಲ್ಲಿ ಒಬ್ಬರು ನಡೆದು ಹೋದರು,  ಬಾಯಲ್ಲಿ ಏನೋ ಮಣಗುಟ್ಟುತ್ತಿದ್ದು, ಕೈಗಳಲ್ಲಿ ಜೋರಾಗಿ ಚಪ್ಪಾಳೆ ತಟ್ಟುತ್ತಾ ನಡೆದಿದ್ದರು. ನಾನು ನಿಂತಿದ್ದ ನೆಲೆಗಿಂತ ಸ್ವಲ್ಪ ಎತ್ತರವಾದ, ದಿಗಂತದಂಚು ಎನ್ನಬಹುದಾದ,  ಪ್ರದೇಶವನ್ನು ಸೇರಿ ಸೂರ್ಯನೆಡೆಗೆ ಕೈ ಮುಗಿದು ನಿಂತು ಹಾಗೇ ಪ್ರಾರ್ಥಿಸುತ್ತಿದ್ದರು.  ನಾನು ಬೇರೆ ಬೇರೆ ಸಂಯೋಜನೆಗಳನ್ನು ಮಾಡಿ ಕೊನೆಗೆ ಅವರನ್ನೂ ಸೇರಿಸಿಕೊಂಡು ಚಿತ್ರಿಸುವವರೆಗೂ ಅವರಲ್ಲೇ ನಿಂತಿದ್ದರು.  ನಾನು ಬಳಸುತ್ತಿದ್ದುದು ದೂರದರ್ಶಿ ಮಸೂರವಾದ್ದರಿಂದ ಅವರಿಗೆ ತಾವೂ  ಈ ಚಿತ್ರದ ಭಾಗವಾಗಿರುವುದು ತಿಳಿಯುವ ಸಾಧ್ಯತೆಯೇ ಇರಲಿಲ್ಲ.         ಈ ಚಿತ್ರದಲ್ಲಿ ಇರುವುದು ಮೂರೇ ಧಾತುಗಳು[Elements]. ಸೂರ್ಯ,  ಮರ  ಮತ್ತು  ಮನುಷ್ಯ.  ಬೆಳಗುತ್ತಿರುವ ಸೂರ್ಯನು  ದೈವಶಕ್ತಿಯ ಸಂಕೇತವಾದರೆ, ತನ್ನ ವಿಸ್ತಾರವಾದ ಶಾಖೋಪಶಾಖೆಗಳಿಂದ ಕೂಡಿರುವ ಮರ- ಪ್ರಕೃತಿಯ ಸಂಕೇತ. ಮರದ ಟೊಂಗ...