Posts

Showing posts from August, 2016

POOKOT LAKE.

Image
   ಪೂಕೋಟ್ ಕೆರೆ,  ವಯನಾಡು.                             ಕೇರಳದ ವಯನಾಡಿನ ವೈತ್ತಿರಿ ಯಲ್ಲಿ ಪೂಕೋಟ್ ಎಂಬ ಕೆರೆಯೊಂದಿದೆ.  ಊಟಿಯ ಸರೋವರಕ್ಕಿಂತ ಸ್ವಲ್ಪ ಚಿಕ್ಕದಾದ ಆದರೆ ತುಂಬಾ ಪ್ರಶಾಂತವಾದ, ಅಷ್ಟು ಜನಸಮ್ಮರ್ದವಿಲ್ಲದ  ಸುಂದರ ಜಲಾಕರವದು.  ಛಾಯಾಗ್ರಹಣವ್ಯಸನಿಗಳಿಗೆ. ಅತಿ ಪುಷ್ಕಳವಾದ ಗ್ರಾಸ ಇಲ್ಲಿಹುದು.          ಹಿಂದೆಲ್ಲಾ  ಸರೋವರವೆಂದರೆ ಹಂಸಗಳು ತೇಲುತ್ತಿರುವತೆ ನಮ್ಮ ಕಲ್ಪನೆಯಿತ್ತು.  ಈಗ ಹಾಗಿಲ್ಲ.  ನಮಗೆ ಸಿಗುವಷ್ಟರಲ್ಲೇ  ಹಂಸವೋ ಚಕ್ರವಾಕವೂ ಕಂಡುಕೊಳ್ಳಬೇಕು, ಕಲ್ಪಿಸಿಕೊಳ್ಳಬೇಕು. ಇಲ್ಲೂ ಹಾಗೆಯೇ.  ಇಡೀ ಪರಿಸರದಲ್ಲಿ ನೀಲಿ ಮತ್ತು ಹಸಿರಿನ ಸ್ವಯಿರವಿಹಾರ.  ಮಧ್ಯೆ  ನಮ್ಮ ದೃಷ್ಟಿಯನ್ನು ನೇರವಾಗಿ ಕೀಲಿಸಿಕೊಳ್ಳುವ  ಮಣ್ಣಿನ ಕಾಲುಹಾದಿ.  ಬಲಗಡೆ ದೋಣಿಗಳ ನಿಲ್ದಾಣ.  ನಿಶ್ಚಲ ಜಲರಾಶಿ. ಅದರಲ್ಲಿ ಪ್ರತಿಬಿಂಬ.  ಈ ಎಲ್ಲದರ ನಡುವೆ ಎಡಗಡೆ ಏರ್ಪಡುವ  ಅವಕಾಶದಲ್ಲಿ  ಬೆಳ್ಳಗಿನ ದೋಣಿಗಳು.  ನಮ್ಮ ಕಣ್ಣನ್ನು ಹಿಡಿದಿಟ್ಟುಕೊಳ್ಳುವ  ಮುಖ್ಯ ಧಾತುವೆಂದರೆ ಅದೇ.  

ON THE WAY TO THE TOP...

Image
   ಚಾಮುಂಡಿಬೆಟ್ಟದ ದಾರಿ...            ಚಾಮುಂಡಿಬೆಟ್ಟದ ಮೇಲಕ್ಕೆ ಹೋಗುವ ರಸ್ತೆ. ಬೆಟ್ಟದ ಮೇಲಿನಿಂದ ಇಳಿದುಬರುತ್ತಿದ್ದ ನನಗೆ ಕಂಡ ದೃಶ್ಯವಿದು.            ಬಸ್ಸೊಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಚಿತ್ರಧಾತುಗಳೂ ಸರಿಸುಮಾರು ಒಂದೇ ಜಾತಿಯ ವರ್ಣಪ್ರವರ್ಗದಲ್ಲಿದೆ.  ಹಾಗಾಗಿ  ಇಡೀ ವಾತಾವರಣಕ್ಕೆ  ಚಕಿತಗೊಳಿಸುವ ವಿಷಮವರ್ಣದ ವಸ್ತುವೊಂದನ್ನು ಹುಡುಕುತ್ತಿದ್ದೆ.  ಕೆಂಪು ವೋಲ್ವೋ ಬಸ್ಸಿನ ರೂಪದಲ್ಲಿ ಅದು ಸಾಕಾರವಾಯಿತು.  ಹಸಿರು, ಗಾಢನೀಲಿ ಬಣ್ಣಗಳ ಮೇಲಾಟದಲ್ಲಿ ಸತ್ವ ಕಳೆದುಕೊಂಡು ಮೂಲೆಗುಂಪಾಗಿದ್ದ ಕೆಂಪಿನ ಜಾತಿಯ ವರ್ಣಪ್ರವರ್ಗಕ್ಕೆ [ನೆಲದ ಮಣ್ಣಬಣ್ಣ ಪ್ರಬಲವಾಗಿಲ್ಲ!] ಚೈತನ್ಯವೀಯಲೋ ಎಂಬಂತೆ ನುಗ್ಗಿ ಬರುತ್ತಿರುವ ಬಸ್ಸಿನರೂಪದಲ್ಲಿ  ಕೆಂಪು ತನ್ನ ಅಸ್ತಿತ್ವವನ್ನು ಸ್ಥಾಪಿಸುತ್ತಿದೆ. ಕೆಂಪು ಆಕ್ರಮಣಕಾರಿ ವ್ಯಕ್ತಿತ್ವದ ಸಂಕೇತವೂ ಹೌದು.             ನಾಡ ಸ್ವಾತಂತ್ರ್ಯಸಂಗ್ರಾಮದಲ್ಲಿ ಹಲವು ನಾಯಕರು ತಮ್ಮ ತತ್ವಸಿದ್ಧಾಂತಗಳಲ್ಲಿ ಇಟ್ಟುಕೊಳ್ಳದ, ಆದರೆ ಅನಿವಾರ್ಯವಾಗಿದ್ದ ಕ್ಷಾತ್ರರಣತೇಜದ ಕುರುಹು ಆಗ ಸಂದಿಗ್ಧಕಾಲದಲ್ಲಿ ಮೂಡಿಬಂದ  ಒಬ್ಬರೇ ಒಬ್ಬ ನಾಯಕರ ರೂಪದಲ್ಲಿ  ಸಾಕಾರವಾಯಿತು. ಅವರೇ ನೇತಾಜಿ. ...

LINE OF BEGGERS.

Image
    ಸಾಲು ಭಿಕ್ಷುಕರು.            ನಗರದ  ವಾಣಿಜ್ಯಸಂಕೀರ್ಣವೊಂದರ ಆವರಣಗೋಡೆಯ ವಿನ್ಯಾಸವಿದು. ಒಳಗೆ ಬ್ಯಾಂಕೊಂದರ ಎಟಿಎಂ ಇದೆ. ಹಾಗಾಗಿ  ಅದರ ಸೂಚನಾಫಲಕವೂ ಮುಂದೆ ಇದೆ.  ಈ ಆವರಣಗೋಡೆಯ ವಿನ್ಯಾಸವನ್ನು ನೋಡಿ-  ಎರಡೂ ಕೈಗಳಲ್ಲಿ ಭಿಕ್ಷಾಪಾತ್ರೆಯನ್ನು ಎತ್ತಿ  ಹಿಡಿದು  ಸಾಲಾಗಿ ನಿಂತು ಅಂಗಲಾಚುತ್ತಿರುವಂತೆ ಕಾಣುವುದಿಲ್ಲವೇ? ಇದನ್ನೇ ಸಾಲು ಭಿಕ್ಷುಕರು ಎಂದು ಕರೆದದ್ದು.  ಹಿನ್ನೆಲೆಯೆಲ್ಲಿ ಕಾಣುವ ಎಟಿಎಂನ ಬೋರ್ಡು  ಈ  ಸಾಲಿಗೆ ಒಂದು ತಾಳಮೇಳವನ್ನೊದಗಿಸಿದೆ.           ನಗರವಾಸಿಗಳಾದ ನಾವೆಲ್ಲರೂ ಈ ಎಟಿಎಂ ಸೌಲಭ್ಯವನ್ನು ವಿಪರೀತ ಎನ್ನುವಷ್ಟು ಹಚ್ಚಿಕೊಂಡುಬಿಟ್ಟಿದ್ದೇವೆ.  ಹೆಚ್ಚಿನ ಹಣವನ್ನು ಇಂದಿಗೂ ಜತೆಗಿರಿಸಿಕೊಂಡಿರುವುದಿಲ್ಲ.  ಯಾವುದಾದರೂ ಎಟಿಎಂ ಇರುತ್ತಲ್ಲ? ಬೇಕಾದಾಗ ಹಣ ಪಡೆದುಕೊಂಡರಾಯಿತು ಎಂಬ ಧೋರಣೆ! ಆದರೆ ಇತ್ತೀಚಿಗೆ ವಿಚಿತ್ರವಾದ ಬಿಕ್ಕಟ್ಟೊಂದು ಏರ್ಪಟ್ಟಿತು.  ಬ್ಯಾಂಕುಗಳ ಮುಷ್ಕರ, ರಜಾದಿನಗಳು ಒಟ್ಟೊಟ್ಟಿಗೇ  ಬಂದವು, ಮೂರ್ನಾಲ್ಕು ದಿನಗಳು ಬ್ಯಾಂಕುಗಳು ಮುಚ್ಚಿದ್ದವು.  ಎಟಿಎಂಗಳಿಗೆ ಹಣದ ಮರುಪೂರಣದ ವ್ಯವಸ್ಥೆಯೂ ಆಗಲಿಲ್ಲ.  ಹಾಗಾಗಿ ಮೊದಲ ಒಂದೆರಡು ದಿನಗಳಲ್ಲೇ ಎಟಿಎಂಗಳಲ್ಲಿ ಹಣ ಮುಗಿದುಹೋಗಿ , ಜನರು ಪ...

DEBOORU.

Image
        ಮಳೆ ಬರುವ ಮುನ್ನ....          ನಂಜನಗೂಡಿನಿಂದ ಹುಲ್ಲಹಳ್ಳಿಗೆ ಹೋಗುವ ಮಾರ್ಗದಲ್ಲಿ  ಸ್ವಲ್ಪವೇ ದೂರದಲ್ಲಿ ದೇಬೂರು ಸಿಗುತ್ತದೆ.  ಊರಿನ ತಿರುವಿನಿಂದ ಬಲಕ್ಕೆ ಕಾಲುಹಾದಿಯಲ್ಲಿ ಸಾಗಿದರೆ  ಕಪಿಲಾನದೀತೀರಕ್ಕೆ ತಲುಪುತ್ತೇವೆ. ಅಲ್ಲೊಂದು ಜಲರೇಚಕಾಗಾರವಿದೆ. ಒಮ್ಮೆ ಇದೇ  ವರ್ಷಾಕಾಲದಲ್ಲಿ  ಬೆಳ್ಳಂಬೆಳಗ್ಗೆಯೇ  ಹೋಗಿ ಕಾದೆ, ಮೋಡಗಳು ಕವಿಯುವ ತನಕ.  ಹೀಗೊಂದು ದೃಶ್ಯ ಕಂಡಿತು.          ಎಕರೆಗಟ್ಟಲೆ ಹರಡಿರುವ ಸ್ಫುಟವಾದ ಕನ್ನಡಿಯಂತೆ ಕಾಣುವ ನಿಶ್ಚಲ ನದೀ ನೀರು [ಏಕೆಂದರೆ- ಮಳೆ ಕಳೆದ ವರ್ಷವೂ  ಸರಿಯಾಗಿ ಆಗಿರಲಿಲ್ಲ],  ಬೆಳಗ್ಗಿನ ಸಮಯದ ಎಳೆಬಿಸಿಲು ಇನ್ನೂ ಸ್ವಲ್ಪ ಮೋಡಗಳಿಂದ ಮುಚ್ಚದೇ  ಉಳಿದಿದೆ, ಬಹುತೇಕ ಆಕಾಶವು ಮೋಡಗಳಿಂದ ತುಂಬಿದೆ, ನೆಲದಲ್ಲಿ ಹಸಿರು ಪಸರಿಸಿ ಅಲ್ಲಲ್ಲಿ ಸಂತೃಪ್ತಿಯನ್ನು ಸೂಚಿಸುತ್ತಿದೆ   ಆದರೆ - ಅದೇ ಆಕಾಶಕ್ಕೆ ಚಾಚಿ ನಿಂತಿರುವ ಮರಗಳು  ಒಣಗಿಹೋಗಿ, ತಮಗೆ ಈ ಹಸಿರ ತೊಡುಗೆ ತೊಡಿಸುವಷ್ಟು  ಮಳೆಯನ್ನು   ತರಲಾರಿರಾ? ಎಂದು ಹೃದಯವಿದ್ರಾವಕವಾಗಿ ಈ ಮೋಡಗಳನ್ನು ಅಂಗಲಾಚುತ್ತಿರುವಂತಿದೆ.  ವೈರುಧ್ಯವನ್ನು ಬಿಚ್ಚಿಡುವ  ಕಾರಣದಿಂದ  ಈ ಚಿತ್ರವು  ನನ್ನ ಸಂಗ್ರಹ ಸೇರಿ...