Posts

Showing posts from September, 2016

PROHIBITION

Image
        ನಿರ್ಬಂಧ.          ಕಳೆದ ವಾರ ಸೂಚಿಸಲ್ಪಟ್ಟ ಅದೇ ಸ್ಥಳದ ಉತ್ತರದ ತುದಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಹೋಗುವ ದಾರಿ ಸಾಗುತ್ತದೆ. ಈ ದಾರಿಯಲ್ಲಿ ಒಂದೆರಡು ಮಾರು ಹೋದರೆ ಅದೇ ಹಿನ್ನೀರಿನ ಪ್ರದೇಶ ಸಿಗುತ್ತದೆ. ಅಲ್ಲಿ ಈ ತಂತಿಗಳ ಬೇಲಿ ಹಾಕಲ್ಪಟ್ಟಿದೆ- ಹಿಂದಿನಿಂದಲೂ, ಸಹಜವಾಗಿ.  ಸೂರ್ಯಾಸ್ತವನ್ನು ಚಿತ್ರಿಸಲು ಹೋದವನಿಗೆ ಇದೇಕೋ ಆಕರ್ಷಕವೆನ್ನಿಸಿತು, ಸಂಗ್ರಹಿಸಿದೆ,   ಹೀಗೊಂದು ಮಾರ್ಪಾಡಿಗೆ ಮುಂದೆ ಇದು ದಾರಿಯಾಗಬಹುದೆಂದು ಎಂದೂ ಅನ್ನಿಸಿರಲಿಲ್ಲ.             ಪ್ರಶಾಂತವಾದ ಹಿನ್ನೀರು;  ಹಿನ್ನೆಲೆಯಲ್ಲಿ ಮುಳುಗುತ್ತಿರುವ ಸೂರ್ಯ, ರಾಗರಂಜಿತವಾದ ಆಗಸ- ಇವೆಲ್ಲವೂ ಸಂಧ್ಯೆಯ ಸಂಭ್ರಮವನ್ನು ಮನಸ್ಸಿಗೆ ಕಟ್ಟಿಕೊಡುವುದಾದರೂ  ಮುನ್ನೆಲೆಯಲ್ಲಿ ಕಾಣಬರುತ್ತಿರುವ ತಂತಿಬೇಲಿಯು ಇಡೀ ದೃಶ್ಯದ ಒಟ್ಟಂದವನ್ನು ಕ್ರೂರವಾಗಿ ಕೊಲ್ಲುತ್ತಿದೆ-   "ನೀವು ಈ ಆನಂದವನ್ನು ಆಸ್ವಾದಿಸುವಂತಿಲ್ಲ "  ಎಂಬರ್ಥದಲ್ಲಿ. ಅದಕ್ಕೆಂದೇ ಈ ಚಿತ್ರಕ್ಕೆ ನಿರ್ಬಂಧ ಎಂದು ಹೆಸರಿಸಿದ್ದು.   ಈ ವೈರುಧ್ಯದ, ನಿಷೇಧದ ಪ್ರಸ್ತಾಪ  ಮತ್ತು ನಿರೂಪಣೆ ಈಗೇಕೆ ಎಂಬುದು ಸದ್ಯೋವಿದ್ಯಮಾನಗಳನ್ನು ಬಲ್ಲವರಿಗೆ ಅರ್ಥವಾಗದಿರದು.          ತು...

PROTECTED HERITAGE MONUMENT.

Image
        ಸಂರಕ್ಷಿತ ಪ್ರಾಚೀನ ಸ್ಮಾರಕ -       ಈ ಚಿತ್ರದಲ್ಲಿ    ಕಾಣಬರುವ ಎತ್ತರವಾದ ಗೋಡೆಯಂತಹ ವಾಸ್ತುರಚನೆಯು  ಕ್ರಿ. ಶ. ೯ನೇ ಶತಮಾನದ್ದಾಗಿದೆ. ಪಲ್ಲವರ ರಾಜನಾಗಿದ್ದ  ರಾಜಮಾರ್ತಾಂಡನು ತನ್ನ ರಾಜ್ಯದ [ಈಗಿನ ಆಗ್ನೇಯ ಪಾಕಿಸ್ತಾನ]  ದಿಗ್ವಿಜಯದ ಕುರುಹಾಗಿ, ಮಹಿಷಪುರಿ ಪ್ರಾಂತ್ಯದ ಕನ್ನಂಬಾಡಿ ಎಂಬಲ್ಲಿ  ಒಂದು ಮಹಾಗೋಡೆಯನ್ನು ನಿರ್ಮಿಸಿದನು.  ಆ ಅಗಾಧವಾದ ಗೋಡೆಯ ಒಂದು  ಬದಿಗೆ ಆಗಾಗ ಸುರಿದ ಮಳೆನೀರೇ ಸೇರಿ ಸಂಗ್ರಹವಾಗಿ, ಒಂದು ಅಗಾಧವಾದ ಜಲರಾಶಿಯೇ ನಿರ್ಮಾಣವಾಯಿತು. ಆದರೆ, ದೊರೆ ರಾಜಮಾರ್ತಾಂಡನ ಕೀರ್ತಿಯನ್ನು ಸಹಿಸದ ಸ್ಥಳೀಯ ರಾಜನಾಗಿದ್ದ ದ್ವಾರಕಾಧೀಶವರ್ಮನು, ತನ್ನ ನಂಬುಗೆಯ ಶಿಲ್ಪಿಯಾಗಿದ್ದ ಕಾಶೀನಾಥಶರ್ಮನೆಂಬುವನ ಕಡೆಯಿಂದ ಈ ಗೋಡೆಗೆ ಅಲ್ಲಲ್ಲಿ ಕಿಂಡಿಗಳನ್ನೂ, ಸ್ವಯಂಚಾಲಿತ ಕವಾಟಗಳನ್ನೂ  ಅಳವಡಿಸಿದನು. ಅಲ್ಲಿನ ಜನಗಳು  ಈ ಸೌಕರ್ಯದಿಂದ ಅಲ್ಲಿ ಸಂಗ್ರಹವಾಗಿದ್ದ ನೀರನ್ನು ಬೇಕುಬೇಕಾದಾಗ ಬಳಸಿಕೊಂಡು  ಸುಖಶಾಂತಿಸಮೃದ್ಧಿಗಳಿಂದ ಇದ್ದರು.         ತನ್ನ ಮಹೋನ್ನತವಾದ ಆಶಯವು ಹೀಗೆ ವ್ಯತಿರಿಕ್ತವಾದುದನ್ನು ತಿಳಿದು ಕ್ರುದ್ಧನಾದ  ರಾಜಮಾರ್ತಾಂಡನು, ಆಗ ಉತ್ತರದೇಶಾಧಿಪತಿಯಾಗಿದ್ದ  ಮಹಮದ್ ಬಿನ್ ತುಘಲಕ್ ನ ಸಹಾಯವನ್ನು ಕೇಳಿ ಪಡೆದು ಅವನ  ಸೈ...

NEAR KARIGHATTA, BABURAYANAKOPPALU.

Image
   ಕರಿಘಟ್ಟದ ನೋಟ- ಕಾಶಿ ವಿಶ್ವೇಶ್ವರ ದೇವಸ್ಥಾನದ ಮುಂದಿನಿಂದ.                 ಮೈಸೂರು-ಬೆಂಗಳೂರು  ರಸ್ತೆಯ ಬಾಬುರಾಯನಕೊಪ್ಪಲಿನಲ್ಲಿ , ಊರ ಒಳತುದಿಯಲ್ಲಿ  ಕಾಶಿ ವಿಶ್ವೇಶ್ವರ ದೇವಸ್ಥಾನವಿದೆ. ಪುಟ್ಟ ದೇವಸ್ಥಾನದ  ಆ ಪರಿಸರ  ತುಂಬಾ ಪ್ರಶಾಂತವಾಗಿತ್ತು.  ಅಲ್ಲೇ ಮುಂದೆ ಒಂದು ಪ್ರಾಚೀನ ವಟವೃಕ್ಷ, ಪಕ್ಕದಲ್ಲಿ ನದಿಗೆ ಹೋಗುವುದಕ್ಕಾಗಿ  ಕಾಲುದಾರಿ  ಮತ್ತು  ಸುತ್ತಮುತ್ತ ಎಲ್ಲೆಲ್ಲೂ ಪಚ್ಚೆಹಸಿರು ಗದ್ದೆಗಳು -  ಈ ಎಲ್ಲವೂ ಸೇರಿ  ವಾರಾಂತ್ಯದ ಸಂಜೆಗಳನ್ನು ಕಳೆಯಲು ಹೇಳಿಮಾಡಿಸಿದ ತಾಣವಾಗಿತ್ತು.  ಹಿನ್ನೆಲೆಯಲ್ಲಿ ಕಾಣುತ್ತಿರುವ ಬೆಟ್ಟ ಕರಿಘಟ್ಟ. ಅದರ ಮೇಲಿನಿಂದ ನೋಡಿದರೂ ಈ ಪರಿಸರ ಅದ್ಭುತವಾಗಿ ಕಾಣುತ್ತಿತ್ತು. ಈ ಚಿತ್ರವನ್ನು ಸೆರೆಹಿಡಿದಾಗ ನನಗಿದ್ದ ಆಶಯವೂ ಅದೇ - ಬೆಟ್ಟದ ಮೇಲಿನ ದೇವರು ಎಂದರೆ ಅದು ಶ್ರೀನಿವಾಸನೇ , ಹಾಗೇ  ಅವನು ಭಕ್ತರ ಇಷ್ಟಾರ್ಥಗಳನ್ನೆಲ್ಲಾ  ಈಡೇರಿಸುವನು ಎಂಬ ನಂಬಿಕೆಯೂ ಜನಜನಿತವಾದ್ದರಿಂದ,  ಅದನ್ನೊಂದು ರೂಪಕವಾಗಿ ತೋರಿಸಲಿಕ್ಕಾಗಿ ಮೂರು ತೆಂಗಿನಮರಗಳನ್ನು ಮುನ್ನೆಲೆಯಲ್ಲಿಟ್ಟು  ಹಿಂದೆ ಬೆಟ್ಟವನ್ನು ಸಂಯೋಜಿಸಿದ್ದೆ-  ಶ್ರೀಭೂಸಮೇತ ಶ್ರೀನಿವಾಸನು  ಎಂಬ ಭಾವದಿಂದ.         ...

GREENS NEAR AMPHITHEATRE, MYSOORU.

Image
   ಬಯಲುರಂಗಮಂದಿರದ ಹಿಂದಿನ ಹಸಿರಹಾದಿ.            ಅಭಿವೃದ್ಧಿಯ ನೆಪದಲ್ಲಿ ವಿರೂಪಕ್ಕೊಳಗಾಗಿರುವ ಎರಡು ಸ್ಥಳಗಳ ಬಗ್ಗೆ ಇಲ್ಲಿ ಹೇಳುತ್ತಿದ್ದೇನೆ. ಈ ವಾರ ಒಂದು, ಮುಂದಿನವಾರ ಮತ್ತೊಂದು.                      ಮೈಸೂರಿನ ಮಾನಸಗಂಗೋತ್ರಿಯ ಬಯಲುರಂಗಮಂದಿರ ಮತ್ತಿತರ ಸ್ಥಳಗಳನ್ನು ಇತ್ತೀಚೆಗೆ  ಶತಮಾನೋತ್ಸವದ ಅಂಗವಾಗಿ ನವೀಕರಿಸಲಾಯಿತು.   ಸ್ವತಃ ರಾಷ್ಟ್ರಪತಿಗಳೇ ಬರುವವರಿದ್ದರಾಗಿ  [ವಿ ವಿ ಯ ಘಟಿಕೋತ್ಸವಕ್ಕೆ] ಈ ಬಯಲುರಂಗಮಂದಿರದ  ನವೀಕರಣವು, ಭದ್ರತೆಯ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿತು.  ಈ ಸಂಭ್ರಮಕ್ಕೆ ಇಲ್ಲಿ ಎಡಭಾಗದಲ್ಲಿರುವ ಬಡಪಾಯಿ ಮರಗಳು ತುತ್ತಾಗಬೇಕಾಯಿತು. "ವೈದೇಹೀಹರಣಂ ಜಟಾಯುಮರಣಂ " ಎಂಬ ಶ್ಲೋಕಭಾಗವನ್ನು,  "ಕಾಂಕ್ರೀಟೀಕರಣಂ ನಿಸರ್ಗಹನನಮ್ " ಎಂದು ಬದಲಿಸಿ ಮನನ  ಮಾಡಿಕೊಳ್ಳುವಂತೆ ಅದ್ಭುತವಾಗಿ ನಡೆಯಿತು.  ಇಲ್ಲಿಯವರೆಗೆ ಕೇವಲ ನನ್ನ ಗಣಕದ ಮುಖಪರದೆಯಲ್ಲಿ   ಇದ್ದು ನನಗೆ ಮಾತ್ರ ಸಂತೋಷಪ್ರದವಾಗಿದ್ದ ಈ ಚಿತ್ರವನ್ನು, ಈ ರೂಪಾಂತರದ ನಂತರ, ಮುಂದೆಂದೂ ಕಾಣಸಿಗದ  ನಶಿಸಿಹೋದ ಪ್ರಾಣಿಸಂಕುಲದಂತೆ  ಭಾವಿಸಿ, ಸಮಾನಮನಸ್ಕರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ  ಇಲ್ಲಿ ಟಂಕಿಸಿರುವ...

PRAYERS.

Image
       ಪ್ರಾರ್ಥನೆ !                                 ಸಾಮೂಹಿಕ ಪ್ರಾರ್ಥನೆ!