Posts

Showing posts from November, 2016

THE TEA SELLER.

Image
ಚಹಾ ಮಾರುವ ಹುಡುಗ...          ನಸುಕಿನಲ್ಲ್ಲಿನಗರದ ಹೃದಯಭಾಗದಲ್ಲಿ  ಕಾರ್ಯನಿಮಿತ್ತವಾಗಿ  ಸಾಗುತ್ತಿದ್ದ ನನಗೆ   ಟ್ರಾಫಿಕ್ ನಿಲುಗಡೆಯೊಂದರಲ್ಲಿ ರಸ್ತೆ ದಾಟುತ್ತಿದ್ದ ಈ ಚಹಾ ಮಾರುವ ಹುಡುಗ ಕಂಡನು.  ಅಲ್ಲಲ್ಲಿ ತನಗೆದುರು ಕಂಡ ಜನರನ್ನು  ಬಿಡದೆ  ಚಹಾ ಬೇಕೇ ಎಂದು ವಿಚಾರಿಸುತ್ತಾ ತನ್ನ ವ್ಯವಹಾರವನ್ನು ನಡೆಸಿದ್ದನವನು.  ತಟ್ಟನೆ ಏನೋ ಹೊಳೆದಂತಾಗಿ ನನ್ನ ವಾಹನವನ್ನು ನಿಲ್ಲಿಸಿ,  ಅವನು ರಸ್ತೆ ದಾಟುವುದರೊಳಗಾಗಿ ನನಗೆ ಸರಿಕಂಡ ಆಯಕಟ್ಟಿನ ಸ್ಥಳದಲ್ಲಿ ಬಂದು ನಿಂತು ಕಾದೆ.  ಅಷ್ಟುಹೊತ್ತಿಗಾಗಲೇ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ  ಕಾರ್ಯಾರಂಭಿಸಿತ್ತು. ಅವನು ರಸ್ತೆ ದಾಟುವುದಕ್ಕೂ ಹಿಂದೆ ಬರುತ್ತಿದ್ದ ವಾಹನಗಳು ನಿಲ್ಲುವುದಕ್ಕೂ ಸರಿಹೋಯಿತು. ಕೈಲಿದ್ದ ಕ್ಯಾಮರಾ ಹಲವು ಸಲ ಕ್ಲಿಕ್ಕಿಸಿತು.  ಅದರ ಫಲಿತವು ಇಲ್ಲಿದೆ.          ಮೊದಲನೆಯದಾಗಿ, ಆ ಹುಡುಗನ ಜೀವನಶ್ರದ್ಧೆ ಇಷ್ಟವಾಯಿತು. ಮುಂಜಾವಿನ ಚಳಿಗೆ ಲೆಕ್ಕಿಸದೆ ಹೊಟ್ಟೆಪಾಡಿನ ಬಗ್ಗೆ ಗಮನವಿಟ್ಟದ್ದು  ಧನಾತ್ಮಕವೆನ್ನಿಸಿತು.  ಎರಡನೆಯದಾಗಿ,  ಹಿನ್ನೆಲೆಯಲ್ಲಿ ಸಾಲುಗಟ್ಟಿರುವ ವಾಹನಗಳು-   ಮುಂಚೂಣಿಯಲ್ಲಿರುವ ಮೂರರಲ್ಲಿ ಎರಡು ಸರಕುಸಾಗಣೆ ಮಾಡುವ ವಾಣಿಜ್ಯವಾಹನಗಳು,  ಆಗಲೇ  ತಮ್ಮ ವಹಿವಾಟು ಪ್ರ...

SIXTEEN PILLARED MANTAPAM AT NANJANAGOODU

Image
ಹದಿನಾರು ಕಂಭಗಳ  ಮಂಟಪ.          ನಂಜನಗೂಡಿನಲ್ಲಿ ಕಪಿಲಾ ನದಿಯೊಳಗೆ ಹದಿನಾರು ಕಂಭಗಳ ಮಂಟಪವೊಂದಿತ್ತು.  ಪುರಾತನವಾದದ್ದು, ಆದರೆ ಈಗ ನೀರಿನ ಅಥವಾ ಕಾಲನ ಹೊಡೆತಕ್ಕೆ ಸಿಕ್ಕೋ ಏನೋ-  ಎಲ್ಲಾ ಕಂಭಗಳೂ ಕುಸಿದು ಹೋಗಿ, ಈ ಸ್ಥಳ ಖಾಲಿಯಾಗಿದೆ. ಎಂದರೆ ಮಂಟಪ ಇತ್ತೆಂಬ ಯಾವ ಕುರುಹೂ ಕಾಣಬರುವುದಿಲ್ಲ.  ಸಿಕ್ಕದ್ದೇ ಮತ್ತು ಸಿಕ್ಕಷ್ಟೇ ಅದೃಷ್ಟವೆಂದು ಭಾವಿಸಿ ಈ ಚಿತ್ರವನ್ನು ನನ್ನ ಸಂಗ್ರಹಕ್ಕೆ ಸೇರಿಸಿಕೊಂಡೆನು. ಡಿಜಿಟಲ್ ಛಾಯಾಗ್ರಹಣದ ಪೂರ್ವಪರ್ವದ ಫಿಲ್ಮ್ ಬಳಕೆಯ ದಿನಗಳಲ್ಲಿ  ಈ ಮಂಟಪವನ್ನು ಚಿತ್ರಿಸಿದ್ದೇ ಚಿತ್ರಿಸಿದ್ದು. ಆಗ ಇದು ಅಖಂಡವಾಗಿ, ಅಕ್ಷತವಾಗಿತ್ತು.          ಕೇವಲ ದಶಕವೊಂದರ ಹಿಂದೆಯೂ ಸುಸ್ಥಿತಿಯಲ್ಲಿದ್ದ, ಭಾರಿ ಕಲ್ಲುಗಳ ರಚನೆಯೊಂದು  ಈಗ ಇಲ್ಲವೇ ಇಲ್ಲವೆಂದರೆ ಅದು ಅದು ಇತ್ತೀಚಿಗೆ ಉಂಟಾಗುತ್ತಿರುವ ನದಿನೀರಿನ ಪ್ರವಾಹದ ಪರಿಣಾಮವಲ್ಲದೆ  ಮನುಷ್ಯಕೃತವೆನ್ನಲಾದೀತೇ? ಶಾಂತಂ ಪಾಪಂ! ಪ್ರಸ್ತುತ:   ತಾ//8.2.17.   ನಿನ್ನೆ  ನಂಜನಗೂಡಿಗೆ ಹೋಗಿದ್ದಾಗ ಕಣ್ಣಿಗೆ ಕಂಡದ್ದು-  ಆ ಮಂಟಪವು ಪುನರುಜ್ಜೀವನಗೊಂಡು  ನಿಂತಿದೆ!! ಆಡಳಿತಯಂತ್ರ  ಅಂತೂ ಎಚ್ಚರಗೊಂಡಿದೆ! ಸದ್ಯ!

VARUNA LAKE.

Image
ವರುಣಾ-ಕರುಣಾ...          ಮೈಸೂರಿನಿಂದ ತಿ. ನರಸೀಪುರಕ್ಕೆ ಹೋಗುವ ಮಾರ್ಗದಲ್ಲಿ ಅನತಿ ದೂರದಲ್ಲೇ ವರುಣಾ ಗ್ರಾಮವೂ, ಅಲ್ಲೇ ಎಡಬದಿಗೆ ವರುಣಾಕೆರೆಯೂ  ಸಿಗುತ್ತವೆ.  ಇತ್ತೀಚೆಗಂತೂ ದಸರಾ ಕಾಲದಲ್ಲಿ ಜಲಕ್ರೀಡೆಗಳಿಗೋಸ್ಕರ  ಇದನ್ನು ತುಂಬಿಸಿರುತ್ತಾರೆ.  ಕೆಲವರ್ಷಗಳ ಹಿಂದೆ ಈ ಕೆರೆಯ ಎಡಪಕ್ಕದಲ್ಲಿ  ಸಮೃದ್ಧವಾದ ಮರಗಳ ತೋಪೊಂದಿತ್ತು.  ಕ್ರಮೇಣ ಅವುಗಳು ಒಂದೊಂದಾಗಿ, ಗುಂಪುಗುಂಪಾಗಿ   ನಮಗೆಲ್ಲಾ ಅರ್ಥವಾಗದ ಯಾವುದೋ ಘನವಾದ ಕಾರಣಗಳಿಂದ  ಕೊಡಲಿಗಳಿಗೆ ಬಲಿಯಾದವು.  ಹಲವಾರು ಸಲ ಆ ತಾಣಕ್ಕೆ ಹೋಗಿಬರುವ ಪರಿಪಾಠವನ್ನಿಟ್ಟುಕೊಂಡಿದ್ದ  ನನಗೆ  ಈ ವೃಕ್ಷಹನನ ನೋವನ್ನುಂಟುಮಾಡಿತು.  ನನ್ನದೇ ರೀತಿಯಲ್ಲಿ  ಇದನ್ನು ಹೀಗೆ ವ್ಯಾಖ್ಯಾನಿಸುವ ಪ್ರಯತ್ನ ಮಾಡಿದ್ದೇನೆ.          ಪ್ರಕೃತಿ ಸುಂದರ: ಎಂದು ಭಾವುಕವಾಗಿ   ಇಲ್ಲಿನ  ಮೇಘಮಾಲಾಲಂಕೃತವಾದ  ಆಕಾಶವನ್ನೂ, ೨/೩ ಅನುಪಾತದಲ್ಲಿ ದೃಶ್ಯವಾಗಿ ಸಂಯೋಜಿಸಿರುವುದನ್ನೂ ಈ ಸಲ ಪ್ರಸ್ತಾಪಿಸುತ್ತಿಲ್ಲ- ಅವುಗಳನ್ನು ಬಿಟ್ಟು, ಇಲ್ಲಿ ಮುನ್ನೆಲೆಯಲ್ಲಿ ಕಾಣುತ್ತಿರುವ ಮರಗಳ ಕರುಣಾಕಥೆಯ ಕಡೆ ಗಮನ ಸೆಳೆಯುತ್ತಿದ್ದೇನೆ.  ಶಿರಚ್ಛೇದನಕ್ಕೆ ಒಳಗಾಗಿರುವ ತಮ್ಮವನೇ ಆದ ಮಿತ್ರನ[ಮಧ್ಯದಲ್ಲಿರುವ ತುಂಡಾದ ಮರ] ...

COL. BAILEY'S DUNGEON.

Image
ನೆರಳು  ಬೆಳಕಿನ ಚಿತ್ತಾರ-       ಶ್ರೀರಂಗಪಟ್ಟಣದ ಕರ್ನಲ್ ಬೈಲಿ ನೆಲಮಾಳಿಗೆ ಸೆರೆಮನೆಯಲ್ಲಿ ಹಲವಾರು ಛಾಯಾಗ್ರಹಣದ ಅವಕಾಶವಿರುತ್ತದೆ. ಇದೊಂದು ಸರಳವಾದ ಸಂಯೋಜನೆಯಷ್ಟೇ.                  ಇಲ್ಲಿ ಅತಿ ಪ್ರಖರವಾದ ಬೆಳಕಿನ ರಾಚುವಿಕೆ ಇದೆ - ಹಾಗೇ ಗಾಢವಾದ ನೆರಳಿನ ಆವರಣವೂ ಇದೆ.   ನಡುವೆಲ್ಲಾ  ಬೆಳಕಿನಿಂದ ಕತ್ತಲಿನೆಡೆಗೆ  ಹಲವಾರು ಛಾಯಾ ವೈವಿಧ್ಯಗಳು.  ಕಂಭಗಳ ಮೇಲೆ ಮೂಡಿರುವ ಪ್ರಖರವಾದ ಬೆಳಕಿನ ಪಟ್ಟಿಗಳ ಧಾರ್ಷ್ಟ್ಯಕ್ಕೆ  ಸುತ್ತ ಕಮಾನುಗಳ ಆಕೃತಿಯಲ್ಲೂ, ಹಾಗೇ  ನೆಲದ  ಚಪ್ಪಟೆಯ ಪಾತಳಿಯಲ್ಲೂ  ಕಂಡುಬರುವ ನೆರಳು ಅಥವಾ ಕತ್ತಲೆಯ ಗಾಢತೆಯು  ಆವರಿಸಿಕೊಂಡು ಸಮಾಧಾನಿಸುತ್ತಿರುವಂತಿದೆ.  ಇದು ನಮ್ಮ ಮಣ್ಣಿನ ಗುಣವಲ್ಲವೇ ? ಶತಮಾನಗಳ ಕಾಲ ಪರಕೀಯರ ಆಕ್ರಮಣಕ್ಕೆ  ತುತ್ತಾದರೂ ಅವೆಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡು ನಮ್ಮತನವನ್ನು ಬಿಟ್ಟುಕೊಡದೇ  ಉಳಿದುಬಂದವರು ನಾವು.  ಈ ಚಿತ್ರದಲ್ಲಿನ ಸಾಲುಕಂಭಗಳಲ್ಲಿ ಕೆಳಮುಖವಾಗಿ ಚೂಪುಚೂಪಾಗಿ  ಮೂಡಿರುವ  ಬೆಳಕಿನ ಪಟ್ಟೆಗಳು ಅಲ್ಲಿ  ಆಳಿದ,  ನಮ್ಮನ್ನು ಅಳಿಸಿದ ಯವನಾಧಮನ  ದಮನಕಾರಿ ಕ್ರೌರ್ಯವನ್ನೂ,  ನೆಲದ ಹಾಗೂ ಕಮಾನುಗಳ  ನೆರಳ...