Posts

Showing posts from October, 2016

DEBATE FOR BATHING.

Image
ಯಂಕ, ನಾಣ  ಮತ್ತು ಸೀನ-  ಸ್ನಾನೋಪಾಖ್ಯಾನ.                         ಮಳವಳ್ಳಿಯಿಂದ  ಕೊಳ್ಳೇಗಾಲಕ್ಕೆ ಹೋಗುವ ಹೆದ್ದಾರಿಯಲ್ಲಿ ಕಾವೇರೀನದಿ ಸೇತುವೆಯ ಮೇಲಿನಿಂದ  ಕ್ಲಿಕ್ಕಿಸಿದ  ಸೂರ್ಯಾಸ್ತದ ದೃಶ್ಯವಿದು.  ಸೂರ್ಯಾಸ್ತದ ಸೊಬಗಿಗಿಂತ  ಇಲ್ಲಿ ಕಾಣುತ್ತಿರುವ ಮೂವರು ಮಿತ್ರರ ಮಾತುಕತೆಗಳು ನನಗೆ ಹೆಚ್ಚು  ಆಸಕ್ತಿಯನ್ನುಂಟುಮಾಡಿದವು.  ಅವರನ್ನು ಮಾತನಾಡಿಸಿ,  ಕೇಳಿದಾಗ ತಿಳಿದುಬಂದದ್ದು ಇದು :-           ಜಲವಿಹಾರಕ್ಕೆಂದು ಮುಂಜಾನೆಯೇ ಬಂದವರಂತೆ[ಸ್ನಾನವೂ ಸೇರಿ],  ಎಡದಿಂದ ಕ್ರಮವಾಗಿ ಅವರ ಹೆಸರುಗಳು ಯಂಕ, ನಾಣ ಮತ್ತು ಸೀನ ಎಂದಂತೆ.  ಯಂಕನಿಗೆ ತಣ್ಣೀರು ಎಂದರೆ ಅಲರ್ಜಿ- ಹಾಗಾಗಿ ಏನೇ ಆಟವಾಡಿದರೂ ನೀರಿಗೆ ಮಾತ್ರ ಇಳಿಯುವುದಿಲ್ಲ ಎಂದು ಘೋಷಿಸಿದವನೇ ಸ್ನಾನವನ್ನೂ  ಮಾಡದೇ ಬೆಳಗ್ಗಿನಿಂದ ಹಾಗೇ  ಉಳಿದಿದ್ದಾನೆ.  ನಾಣ  ಅತಿ ಜಾಗರೂಕನಾದ್ದರಿಂದ  ಬೆಳಗ್ಗೆ ಇಲ್ಲಿಗೆ ಬಂದ  ತಕ್ಷಣವೇ  ನೀರಿನಲ್ಲಿ ಮುಳುಗೆದ್ದು ಮಿಂದು  ಆಗಿನಿಂದ ವಿಹಾರಪರನಾಗಿದ್ದಾನೆ.  ಇನ್ನು  ಸೀನನಾದರೋ,  ಉಳಿದಿಬ್ಬರಿಗಿಂತ ಭಿನ್ನನಾದುದರಿಂದ   ಸೂರ್...

WATER TANK NEAR BANAKAL PETE.

Image
       ಮರದಮೇಲಿನ  ನೀರಿನತೊಟ್ಟಿ.                                           ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಹೋಗುವ ದಾರಿಯಲ್ಲಿ ಬಣಕಲ್ ಪೇಟೆಗೆ ಮುನ್ನ ರಸ್ತೆಯ ತಿರುವೊಂದರಲ್ಲಿ  ಸಿಗುವ ಉಪಹಾರಗೃಹದ  ಭಾಗಶಃ ಚಿತ್ರವಿದು.  ಅವರು ಛಾವಣಿ ಮೇಲಿರಿಸುವ ನೀರಿನ ತೊಟ್ಟಿಯನ್ನು  ಹಿತ್ತಲಿನ ಮರವೊಂದರ ಮೇಲೆ ಸ್ಥಾಪಿಸಿರುವ  ಚಾತುರ್ಯವನ್ನು ನೋಡಿ ಮೆಚ್ಚಿಗೆಯಾಯಿತು,  ಕ್ಲಿಕ್ಕಿಸಿ ನನ್ನ ಸಂಗ್ರಹಕ್ಕೆ ಸೇರಿಸಿಕೊಂಡೆ.           ಜೀವಂತವಾಗಿರುವ ಮರವಾದ್ದರಿಂದ ಭದ್ರವಾಗಿ ಬೇರೂರಿದೆ. ಅಷ್ಟು ಭಾರವನ್ನು ಖಂಡಿತಾ ತಾಳಿಕೊಳ್ಳುತ್ತದೆ.  ಹೀಗೆ ಪರಿಸರದೊಂದಿಗೆ ಬೆರೆತು ಮಾಡಿಕೊಳ್ಳುವ ಅನುಕೂಲಗಳ ಪರಿಕಲ್ಪನೆಯೇ ಆಹ್ಲಾದಕರ!!

FROM OVER JAVAGANAHALLI HILLOCK...

Image
        ಜವಗನಹಳ್ಳಿ ಗುಡ್ಡದ ಮೇಲಿನಿಂದ.....           ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ಹೆದ್ದಾರಿಯಲ್ಲಿ  ಕಾವೇರೀ ನದಿಗುಂಟ  ಸಾಗುವಷ್ಟು  ಭಾಗದ  ಬಲಗಡೆ  ಸ್ವಲ್ಪ ಎತ್ತರವಾದ ಗುಡ್ಡಗಳ ಸಾಲು ಇದೆ,  ಜವಗನಹಳ್ಳಿ ಗುಡ್ಡ ಎಂದು  ಅದರ ಹೆಸರು.  ಆ ರಸ್ತೆಯಲ್ಲಿ ಹೋಗುವಾಗಲೆಲ್ಲಾ  ಈ ಗುಡ್ಡದ ಮೇಲೆ ಹತ್ತಿ, ನಿರ್ದಿಷ್ಟ ಸ್ಥಳವೊಂದನ್ನು ತಲುಪಿ, ಅಲ್ಲಿಂದ ಚಿತ್ರಗಳನ್ನು ಸೆರೆಹಿಡಿಯುವುದು ರೂಢಿ.  ಇದು ಹಲವಾರು ವರ್ಷಗಳಿಂದಲೂ ನಡೆದುಬಂದಿರುವ ಕ್ರಮ;  ನನ್ನೆಲ್ಲ ಛಾಯಾಗ್ರಹಣ ಸಹವರ್ತಿಗಳನ್ನೂ  ಇಲ್ಲಿ ಹತ್ತಿಸಿದ್ದೇನೆ.   ಇಲ್ಲಿಂದ ಕಾವೇರೀನದಿಯಾಚೆ ಭರಚುಕ್ಕಿಗೆ ಹೋಗುವ ರಸ್ತೆಯಲ್ಲಿ ಸಿಗುವ  ಮಧ್ಯರಂಗದ ದೇವಸ್ಥಾನವೂ, ಅದರ ಪಕ್ಕದಿಂದ ಪ್ರಾರಂಭವಾಗುವ- ನದಿಗೆ ಅಡ್ಡವಾಗಿ ನಿರ್ಮಿಸಿರುವ  ಒಡ್ಡೂ,  ಒಂದೇ ನೋಟಕ್ಕೆ ದಕ್ಕುತ್ತವೆ.  ಹಾಗಾಗಿ ನನಗದು  ಕಾಶೀ-ಪ್ರಯಾಗವೇ.          ಒಡ್ಡಿನಿಂದ ತಡೆಯಲ್ಪಟ್ಟಿರುವುದರಿಂದ ತುಂಬಿಕೊಂಡು ಘನಗಂಭೀರವಾಗಿ, ನಿಶ್ಚಲವಾಗಿ ಕಾಣುತ್ತಿರುವ  ಜಲರಾಶಿ,  ಅದರಲ್ಲಿ ನೀಲಾಕಾಶದ ಪ್ರತಿಬಿಂಬ  ಇವುಗಳು-  ಒಡ್ಡಿನ ಆಕೃತಿಯನ್ನೇ ಅನುಸರಿಸಿ ಸಾಗುತ್ತಾ ಈ ...

MYSOORU PALACE MAIN ENTRANCE.

Image
        ಮೈಸೂರು ಅರಮನೆ  ಮಹಾದ್ವಾರ.          ನಂಜನಗೂಡಿನಿಂದ  ನೇರವಾಗಿ ರಾಜಧಾನಿಗೇ ಎಂದು ಬಸ್ ಹತ್ತಿದ್ದವನು, ಮಾರ್ಗಮಧ್ಯೆ ಮೈಸೂರು ಅರಮನೆಯನ್ನು  ಹಾದುಹೋಗುತ್ತಿರುವಂತೆ ಈ ದೃಶ್ಯ ಕಂಡು ಧಿಢೀರನೆ ಮನಸ್ಸು ಬದಲಾಯಿಸಿ ಅಲ್ಲೇ ಇಳಿದುಬಿಟ್ಟೆ. ಜತೆಗೆ ತ್ರಿಪಾದವನ್ನೊಯ್ದಿರಲಿಲ್ಲ, ಹಾಗಾಗಿ ಅಲ್ಲಿದ್ದ ರಿಕ್ಷಾವೊಂದರ ಛಾವಣಿಯನ್ನೇ  ಆಧರಿಸಿ ಕ್ಯಾಮರಾವನ್ನಿಟ್ಟು ಕ್ಲಿಕ್ಕಿಸಿದ ಚಿತ್ರವಿದು. ಹಿಂದೆಲ್ಲ ಚಿತ್ರಿಸಿದ ಇದೇ  ದೃಶ್ಯವು  ಕತ್ತಲಾದ ಮೇಲೆ ತೆಗೆದಂಥವು, ಇದರಂತೆ ಸೂರ್ಯಾಸ್ತವನ್ನೂ ಸೇರಿಸಿದಂತೆ ದೀಪಾಲಂಕಾರವೂ ಸೇರಿಕೊಂಡು ವಿಶಿಷ್ಟವೆನ್ನಿಸುವಂತಿರಲಿಲ್ಲ.            ದೃಶ್ಯವಿಸ್ತಾರವನ್ನುಂಟುಮಾಡುವ ಉದ್ದೇಶದಿಂದ ಇಲ್ಲಿ ಬಲಗಡೆ ಕಾಣುವ ದೀಪಸ್ತಂಭವನ್ನು ಚೌಕಟ್ಟಿನೊಳಗೆ ಸೇರಿಸಿದ್ದೇನೆ.