BEFORE HARVEST..

        ಸಂಕ್ರಾಂತಿಗೆ  ಮುನ್ನ  ಕಟಾವಿಗೆ ಸಿದ್ಧವಾಗಿರುವ ಬೆಳೆ ... 

    
                       


        ಶ್ರೀರಂಗಪಟ್ಟಣದಿಂದ  ಕರಿಘಟ್ಟಕ್ಕೆ  ಹೋಗುವ  ದಾರಿಯಲ್ಲಿ  ಇಕ್ಕೆಲಗಳಲ್ಲೂ  ಪಚ್ಚೆಹಸಿರು: ಭತ್ತದ ಗದ್ದೆಗಳು. ಸಾಮಾನ್ಯವಾಗಿ ಡಿಸೆಂಬರ್ ಕೊನೆಯ ವೇಳೆಯಲ್ಲಿ ಪೈರು ಕಟಾವಿಗೆ ಸಿದ್ಧಗೊಂಡಿರುತ್ತದೆ.  ಈ   ಭತ್ತದ ಗದ್ದೆಗಳು ಕಟಾವಿಗೆ ಪಕ್ವವಾದ  ಸಮಯದಲ್ಲಿ  ವಿಶಿಷ್ಟವಾದ ಹೊಂಬಣ್ಣವನ್ನು ತಳೆಯುತ್ತವೆ, ನಮ್ಮಗಳ ಮನಸ್ಸಿಗೆ  ಚೇತೋಹಾರಿಯಾಗಿ ಪರಿಣಮಿಸಿ  ದೇಶ್ ಎಂಬ ರಾಗದ ಭಾವರೂಪವಾದ  ಆನಂದವನ್ನುಂಟುಮಾಡುತ್ತದೆ.  ಇರಲಿ, ಈ ದೇಶ್ ರಾಗದ ವಿಷಯ ಸದ್ಯಕ್ಕೆ ಬೇಡ. 

         ಪ್ರಸ್ತುತ ಚಿತ್ರದಲ್ಲಿ ಹಳದಿಯಿಂದ ಪ್ರಾರಂಭವಾಗುವ ಬಣ್ಣಗಳ ಹರವು, ಮೇಲೆ ಆಕಾಶದಲ್ಲಿನ - ಹಳದಿಗೆ ಪ್ರತ್ಯರ್ಥಿಯಾದ ನೀಲಿಬಣ್ಣದೊಂದಿಗೆ ಪರ್ಯಾವಸಾನಗೊಂಡಿದೆ. ಮುನ್ನೆಲೆಯಲ್ಲಿನ ಈ ಹಳದಿಯ ವಿಜೃಂಭಣೆ  ಅದರ ಹಿಂದಿರುವ ಕಬ್ಬಿನಗದ್ದೆಗಳ ಹಸಿರಿನಿಂದ ಬೆಂಬಲಿಸಲ್ಪಟ್ಟರೂ,   ಹಿನ್ನೆಲೆಯಲ್ಲಿನ ಬೆಟ್ಟದ ಭಾಗದ  ಹಾಗೂ ಆಗಸದ ಶಾಂತವಾದ, ಪೇಲವವಾದ  ಬಣ್ಣಗಳ  ಸರಹದ್ದಿನಿಂದ  ಸಹಕರಿಸಲ್ಪಡದೇ, ಒಂಟಿಯಾಗಿ ಉಳಿದಿದೆ.  ಮಧ್ಯದಲ್ಲಿ ಇರುವ  ತೆಂಗಿನ ಮರಗಳು,  ಈ ತುಮುಲದಲ್ಲಿ  ತಾವೂ  ಸಕ್ರಿಯವಾಗಿ ಇದ್ದೇವೆ ಎನ್ನುವಂತೆ ತಂತಮ್ಮ ಹಳದಿ ಬಣ್ಣದ ಹಣ್ಣುಗರಿಗಳನ್ನು ತೋರಿಸುತ್ತಾ  ಕೂಗುತ್ತಿರುವಂತಿದೆ. 

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....