PROTECTED HERITAGE MONUMENT.

        ಸಂರಕ್ಷಿತ ಪ್ರಾಚೀನ ಸ್ಮಾರಕ -




      ಈ ಚಿತ್ರದಲ್ಲಿ   ಕಾಣಬರುವ ಎತ್ತರವಾದ ಗೋಡೆಯಂತಹ ವಾಸ್ತುರಚನೆಯು  ಕ್ರಿ. ಶ. ೯ನೇ ಶತಮಾನದ್ದಾಗಿದೆ. ಪಲ್ಲವರ ರಾಜನಾಗಿದ್ದ  ರಾಜಮಾರ್ತಾಂಡನು ತನ್ನ ರಾಜ್ಯದ [ಈಗಿನ ಆಗ್ನೇಯ ಪಾಕಿಸ್ತಾನ]  ದಿಗ್ವಿಜಯದ ಕುರುಹಾಗಿ, ಮಹಿಷಪುರಿ ಪ್ರಾಂತ್ಯದ ಕನ್ನಂಬಾಡಿ ಎಂಬಲ್ಲಿ  ಒಂದು ಮಹಾಗೋಡೆಯನ್ನು ನಿರ್ಮಿಸಿದನು.  ಆ ಅಗಾಧವಾದ ಗೋಡೆಯ ಒಂದು  ಬದಿಗೆ ಆಗಾಗ ಸುರಿದ ಮಳೆನೀರೇ ಸೇರಿ ಸಂಗ್ರಹವಾಗಿ, ಒಂದು ಅಗಾಧವಾದ ಜಲರಾಶಿಯೇ ನಿರ್ಮಾಣವಾಯಿತು.

ಆದರೆ, ದೊರೆ ರಾಜಮಾರ್ತಾಂಡನ ಕೀರ್ತಿಯನ್ನು ಸಹಿಸದ ಸ್ಥಳೀಯ ರಾಜನಾಗಿದ್ದ ದ್ವಾರಕಾಧೀಶವರ್ಮನು, ತನ್ನ ನಂಬುಗೆಯ ಶಿಲ್ಪಿಯಾಗಿದ್ದ ಕಾಶೀನಾಥಶರ್ಮನೆಂಬುವನ ಕಡೆಯಿಂದ ಈ ಗೋಡೆಗೆ ಅಲ್ಲಲ್ಲಿ ಕಿಂಡಿಗಳನ್ನೂ, ಸ್ವಯಂಚಾಲಿತ ಕವಾಟಗಳನ್ನೂ  ಅಳವಡಿಸಿದನು. ಅಲ್ಲಿನ ಜನಗಳು  ಈ ಸೌಕರ್ಯದಿಂದ ಅಲ್ಲಿ ಸಂಗ್ರಹವಾಗಿದ್ದ ನೀರನ್ನು ಬೇಕುಬೇಕಾದಾಗ ಬಳಸಿಕೊಂಡು  ಸುಖಶಾಂತಿಸಮೃದ್ಧಿಗಳಿಂದ ಇದ್ದರು.

        ತನ್ನ ಮಹೋನ್ನತವಾದ ಆಶಯವು ಹೀಗೆ ವ್ಯತಿರಿಕ್ತವಾದುದನ್ನು ತಿಳಿದು ಕ್ರುದ್ಧನಾದ  ರಾಜಮಾರ್ತಾಂಡನು, ಆಗ ಉತ್ತರದೇಶಾಧಿಪತಿಯಾಗಿದ್ದ  ಮಹಮದ್ ಬಿನ್ ತುಘಲಕ್ ನ ಸಹಾಯವನ್ನು ಕೇಳಿ ಪಡೆದು ಅವನ  ಸೈನ್ಯದೊಂದಿಗೆ ದ್ವಾರಕಾಧೀಶವರ್ಮನ ಮೇಲೆ ದಂಡೆತ್ತಿಬಂದು, ಈ ಗೋಡೆಯನ್ನು ತನ್ನ ಕೈವಶಮಾಡಿಕೊಂಡನು.  ಹಾಗೂ ಸ್ಥಳೀಯ ಜನರನ್ನು  ತಡೆಯಲು  ಆ ಸೈನಿಕರನ್ನು ನೇಮಿಸಿದನು. ಇದರಿಂದಾಗಿ ಆ ಸ್ಥಳೀಯ ಜನಗಳಿಗೆ ಈ ಅಗಾಧವಾದ ಜಲರಾಶಿಯ ಪ್ರಯೋಜನವಾಗದೇ ಅವರು ನಷ್ಟಹೊಂದಿದರು.   ಆ ಜಲರಾಶಿಯೂ ಅಲ್ಲಿ ನಿಲ್ಲದೆ ಹರಿದುಹೋಗಿ, ನೆಲ ಬೆಂಗಾಡಾಯಿತು.  ಹೀಗೆ ರಾಜಮಾರ್ತಾಂಡನು ತನ್ನ ಆಶಯವನ್ನು ಈಡೇರಿಸಿಕೊಂಡನು.  ಈ ಇತಿಹಾಸವನ್ನು  ನಮಗೆ ನೆನಪಿಸುತ್ತಾ  ಈಗಲೂ  ಮೂಕಸಾಕ್ಷಿಯಾಗಿ ನಿಂತಿದೆ - ಈ ಮಹಾಗೋಡೆ.

        ದೊರೆಯಾದ ರಾಜಮಾರ್ತಾಂಡನ ಶೌರ್ಯಗಾಥೆಯನ್ನು ನಾವೆಲ್ಲರೂ ಮೆಚ್ಚಿ ತಲೆದೂಗಬೇಕಲ್ಲವೇ?
        

Comments

Popular posts from this blog

KODIBAYI KATTE AREA.

PRAYING BEFORE GOD....

END FOR THE DAY'S WORK....