NEAR KARIGHATTA, BABURAYANAKOPPALU.
ಕರಿಘಟ್ಟದ ನೋಟ- ಕಾಶಿ ವಿಶ್ವೇಶ್ವರ ದೇವಸ್ಥಾನದ ಮುಂದಿನಿಂದ.
ಮೈಸೂರು-ಬೆಂಗಳೂರು ರಸ್ತೆಯ ಬಾಬುರಾಯನಕೊಪ್ಪಲಿನಲ್ಲಿ , ಊರ ಒಳತುದಿಯಲ್ಲಿ ಕಾಶಿ ವಿಶ್ವೇಶ್ವರ ದೇವಸ್ಥಾನವಿದೆ. ಪುಟ್ಟ ದೇವಸ್ಥಾನದ ಆ ಪರಿಸರ ತುಂಬಾ ಪ್ರಶಾಂತವಾಗಿತ್ತು. ಅಲ್ಲೇ ಮುಂದೆ ಒಂದು ಪ್ರಾಚೀನ ವಟವೃಕ್ಷ, ಪಕ್ಕದಲ್ಲಿ ನದಿಗೆ ಹೋಗುವುದಕ್ಕಾಗಿ ಕಾಲುದಾರಿ ಮತ್ತು ಸುತ್ತಮುತ್ತ ಎಲ್ಲೆಲ್ಲೂ ಪಚ್ಚೆಹಸಿರು ಗದ್ದೆಗಳು - ಈ ಎಲ್ಲವೂ ಸೇರಿ ವಾರಾಂತ್ಯದ ಸಂಜೆಗಳನ್ನು ಕಳೆಯಲು ಹೇಳಿಮಾಡಿಸಿದ ತಾಣವಾಗಿತ್ತು. ಹಿನ್ನೆಲೆಯಲ್ಲಿ ಕಾಣುತ್ತಿರುವ ಬೆಟ್ಟ ಕರಿಘಟ್ಟ. ಅದರ ಮೇಲಿನಿಂದ ನೋಡಿದರೂ ಈ ಪರಿಸರ ಅದ್ಭುತವಾಗಿ ಕಾಣುತ್ತಿತ್ತು. ಈ ಚಿತ್ರವನ್ನು ಸೆರೆಹಿಡಿದಾಗ ನನಗಿದ್ದ ಆಶಯವೂ ಅದೇ -
ಬೆಟ್ಟದ ಮೇಲಿನ ದೇವರು ಎಂದರೆ ಅದು ಶ್ರೀನಿವಾಸನೇ , ಹಾಗೇ ಅವನು ಭಕ್ತರ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸುವನು ಎಂಬ ನಂಬಿಕೆಯೂ ಜನಜನಿತವಾದ್ದರಿಂದ, ಅದನ್ನೊಂದು ರೂಪಕವಾಗಿ ತೋರಿಸಲಿಕ್ಕಾಗಿ ಮೂರು ತೆಂಗಿನಮರಗಳನ್ನು ಮುನ್ನೆಲೆಯಲ್ಲಿಟ್ಟು ಹಿಂದೆ ಬೆಟ್ಟವನ್ನು ಸಂಯೋಜಿಸಿದ್ದೆ- ಶ್ರೀಭೂಸಮೇತ ಶ್ರೀನಿವಾಸನು ಎಂಬ ಭಾವದಿಂದ.
ಈಗ ಇಲ್ಲಿ ಅರ್ಥವಿಕಲ್ಪ ಮಾಡುತ್ತಿದ್ದೇನೆ- ನಮ್ಮ ಆಗ್ನೇಯಕ್ಕಿರುವ ಪ್ರಾಂತ್ಯವೊಂದರ ಕೆಲಜನರು ಇಲ್ಲಿ ವಿಸ್ತಾರವಾದ ಹಾಗೂ ಸೌಕರ್ಯಗಳಿಂದ ಕೂಡಿದ ಮತ್ತೊಂದು ದೇವಸ್ಥಾನವೊಂದನ್ನು ಕಟ್ಟುತ್ತಿದ್ದಾರೆ. ದೇವಾಲಯಗಳ ನಿರ್ಮಾಣ ಆಕ್ಷೇಪಾರ್ಹವಲ್ಲ ಪರಂತು, ಆ ಪರಿಸರಕ್ಕೆ ಹೊಂದದ ವಾಸ್ತುರಚನೆ, ಹಾಗೂ ಅಲ್ಲಿಗೆ ಅನಿವಾರ್ಯವಲ್ಲದ ಅಸ್ತಿತ್ವ ಇವುಗಳು ಮನಸ್ಸಿಗೆ ತೀರಲಾರದ ಬಾಧೆ ಕೊಡುತ್ತವೆ. ಹಾಗಾಗಿ ಈ ಚಿತ್ರವು ಈ ದೃಷ್ಟಿಯಿಂದ ಅಪೂರ್ವವಾದದ್ದು- ಮತ್ತೆ ಹೀಗೆ ಕಾಣಸಿಗದಂತಹದ್ದು. ಇಲ್ಲೆಲ್ಲಾ ಕಟ್ಟಡಗಳು ಎದ್ದಿವೆ.
ಕಳೆದ ವಾರದ ಬರಹದ ಉತ್ತರಾರ್ಧವಿದು. ಸಂಕಟದ ಉತ್ತರಾರ್ಧ ಎಂದಾಗುವುದೋ?
ಮೈಸೂರು-ಬೆಂಗಳೂರು ರಸ್ತೆಯ ಬಾಬುರಾಯನಕೊಪ್ಪಲಿನಲ್ಲಿ , ಊರ ಒಳತುದಿಯಲ್ಲಿ ಕಾಶಿ ವಿಶ್ವೇಶ್ವರ ದೇವಸ್ಥಾನವಿದೆ. ಪುಟ್ಟ ದೇವಸ್ಥಾನದ ಆ ಪರಿಸರ ತುಂಬಾ ಪ್ರಶಾಂತವಾಗಿತ್ತು. ಅಲ್ಲೇ ಮುಂದೆ ಒಂದು ಪ್ರಾಚೀನ ವಟವೃಕ್ಷ, ಪಕ್ಕದಲ್ಲಿ ನದಿಗೆ ಹೋಗುವುದಕ್ಕಾಗಿ ಕಾಲುದಾರಿ ಮತ್ತು ಸುತ್ತಮುತ್ತ ಎಲ್ಲೆಲ್ಲೂ ಪಚ್ಚೆಹಸಿರು ಗದ್ದೆಗಳು - ಈ ಎಲ್ಲವೂ ಸೇರಿ ವಾರಾಂತ್ಯದ ಸಂಜೆಗಳನ್ನು ಕಳೆಯಲು ಹೇಳಿಮಾಡಿಸಿದ ತಾಣವಾಗಿತ್ತು. ಹಿನ್ನೆಲೆಯಲ್ಲಿ ಕಾಣುತ್ತಿರುವ ಬೆಟ್ಟ ಕರಿಘಟ್ಟ. ಅದರ ಮೇಲಿನಿಂದ ನೋಡಿದರೂ ಈ ಪರಿಸರ ಅದ್ಭುತವಾಗಿ ಕಾಣುತ್ತಿತ್ತು. ಈ ಚಿತ್ರವನ್ನು ಸೆರೆಹಿಡಿದಾಗ ನನಗಿದ್ದ ಆಶಯವೂ ಅದೇ -
ಬೆಟ್ಟದ ಮೇಲಿನ ದೇವರು ಎಂದರೆ ಅದು ಶ್ರೀನಿವಾಸನೇ , ಹಾಗೇ ಅವನು ಭಕ್ತರ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸುವನು ಎಂಬ ನಂಬಿಕೆಯೂ ಜನಜನಿತವಾದ್ದರಿಂದ, ಅದನ್ನೊಂದು ರೂಪಕವಾಗಿ ತೋರಿಸಲಿಕ್ಕಾಗಿ ಮೂರು ತೆಂಗಿನಮರಗಳನ್ನು ಮುನ್ನೆಲೆಯಲ್ಲಿಟ್ಟು ಹಿಂದೆ ಬೆಟ್ಟವನ್ನು ಸಂಯೋಜಿಸಿದ್ದೆ- ಶ್ರೀಭೂಸಮೇತ ಶ್ರೀನಿವಾಸನು ಎಂಬ ಭಾವದಿಂದ.
ಈಗ ಇಲ್ಲಿ ಅರ್ಥವಿಕಲ್ಪ ಮಾಡುತ್ತಿದ್ದೇನೆ- ನಮ್ಮ ಆಗ್ನೇಯಕ್ಕಿರುವ ಪ್ರಾಂತ್ಯವೊಂದರ ಕೆಲಜನರು ಇಲ್ಲಿ ವಿಸ್ತಾರವಾದ ಹಾಗೂ ಸೌಕರ್ಯಗಳಿಂದ ಕೂಡಿದ ಮತ್ತೊಂದು ದೇವಸ್ಥಾನವೊಂದನ್ನು ಕಟ್ಟುತ್ತಿದ್ದಾರೆ. ದೇವಾಲಯಗಳ ನಿರ್ಮಾಣ ಆಕ್ಷೇಪಾರ್ಹವಲ್ಲ ಪರಂತು, ಆ ಪರಿಸರಕ್ಕೆ ಹೊಂದದ ವಾಸ್ತುರಚನೆ, ಹಾಗೂ ಅಲ್ಲಿಗೆ ಅನಿವಾರ್ಯವಲ್ಲದ ಅಸ್ತಿತ್ವ ಇವುಗಳು ಮನಸ್ಸಿಗೆ ತೀರಲಾರದ ಬಾಧೆ ಕೊಡುತ್ತವೆ. ಹಾಗಾಗಿ ಈ ಚಿತ್ರವು ಈ ದೃಷ್ಟಿಯಿಂದ ಅಪೂರ್ವವಾದದ್ದು- ಮತ್ತೆ ಹೀಗೆ ಕಾಣಸಿಗದಂತಹದ್ದು. ಇಲ್ಲೆಲ್ಲಾ ಕಟ್ಟಡಗಳು ಎದ್ದಿವೆ.
ಕಳೆದ ವಾರದ ಬರಹದ ಉತ್ತರಾರ್ಧವಿದು. ಸಂಕಟದ ಉತ್ತರಾರ್ಧ ಎಂದಾಗುವುದೋ?

Comments
Post a Comment