GREENS NEAR AMPHITHEATRE, MYSOORU.
ಬಯಲುರಂಗಮಂದಿರದ ಹಿಂದಿನ ಹಸಿರಹಾದಿ.
ಅಭಿವೃದ್ಧಿಯ ನೆಪದಲ್ಲಿ ವಿರೂಪಕ್ಕೊಳಗಾಗಿರುವ ಎರಡು ಸ್ಥಳಗಳ ಬಗ್ಗೆ ಇಲ್ಲಿ ಹೇಳುತ್ತಿದ್ದೇನೆ. ಈ ವಾರ ಒಂದು, ಮುಂದಿನವಾರ ಮತ್ತೊಂದು.
ಮೈಸೂರಿನ ಮಾನಸಗಂಗೋತ್ರಿಯ ಬಯಲುರಂಗಮಂದಿರ ಮತ್ತಿತರ ಸ್ಥಳಗಳನ್ನು ಇತ್ತೀಚೆಗೆ ಶತಮಾನೋತ್ಸವದ ಅಂಗವಾಗಿ ನವೀಕರಿಸಲಾಯಿತು. ಸ್ವತಃ ರಾಷ್ಟ್ರಪತಿಗಳೇ ಬರುವವರಿದ್ದರಾಗಿ [ವಿ ವಿ ಯ ಘಟಿಕೋತ್ಸವಕ್ಕೆ] ಈ ಬಯಲುರಂಗಮಂದಿರದ ನವೀಕರಣವು, ಭದ್ರತೆಯ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿತು. ಈ ಸಂಭ್ರಮಕ್ಕೆ ಇಲ್ಲಿ ಎಡಭಾಗದಲ್ಲಿರುವ ಬಡಪಾಯಿ ಮರಗಳು ತುತ್ತಾಗಬೇಕಾಯಿತು. "ವೈದೇಹೀಹರಣಂ ಜಟಾಯುಮರಣಂ " ಎಂಬ ಶ್ಲೋಕಭಾಗವನ್ನು, "ಕಾಂಕ್ರೀಟೀಕರಣಂ ನಿಸರ್ಗಹನನಮ್ " ಎಂದು ಬದಲಿಸಿ ಮನನ ಮಾಡಿಕೊಳ್ಳುವಂತೆ ಅದ್ಭುತವಾಗಿ ನಡೆಯಿತು. ಇಲ್ಲಿಯವರೆಗೆ ಕೇವಲ ನನ್ನ ಗಣಕದ ಮುಖಪರದೆಯಲ್ಲಿ ಇದ್ದು ನನಗೆ ಮಾತ್ರ ಸಂತೋಷಪ್ರದವಾಗಿದ್ದ ಈ ಚಿತ್ರವನ್ನು, ಈ ರೂಪಾಂತರದ ನಂತರ, ಮುಂದೆಂದೂ ಕಾಣಸಿಗದ ನಶಿಸಿಹೋದ ಪ್ರಾಣಿಸಂಕುಲದಂತೆ ಭಾವಿಸಿ, ಸಮಾನಮನಸ್ಕರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಇಲ್ಲಿ ಟಂಕಿಸಿರುವೆನು. ಈಗ ಇದೇ ಸ್ಥಳವು ಹೇಗಾಗಿದೆ ಎಂಬುವುದು ಪ್ರತ್ಯಕ್ಷವೇ.

Sad story - price to pay for mindless development
ReplyDelete